ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
137

ಪುರುಷರು. ಅವರಿಗೆ 'ಪಾಸಟಿಯಾವಂ' ಸಮಾನರು ಯಾರು? ಎಂದು ಹರಿಹರನು ಕೇಳುವ.
ಇದಾಯಿತು ಹಿಂದಿನ ಹಿರಿಯರು ಬಸವಣ್ಣನವರಿಗೆ ಸಲ್ಲಿಸಿದ ಆದರದ ಅಂಜಲ. ಇನ್ನು ಇಂದಿನ ಹಿರಿಯರಿಬ್ಬರು, ಅವರ ಪುಣ್ಯಸ್ಮೃತಿಗೆ ಅರ್ಪಿಸಿದ ಸಾದರ ಕಾಣಿಕೆಯನ್ನು ನೋಡಿ. ಮೇಲ್ಕಾಣಿಸಿದ ಬಣ್ಣನೆಯು ಬಸವಣ್ಣನವರ ಉನ್ನತ ಜೀವನವನ್ನು ಬೆಳಗುವಂತೆ - ಮುಂದಿನದು ಅವರ ಮಹಾಕಾರ್ಯದ ಅಲೌಕಿಕತೆಯನ್ನು ಎತ್ತಿ ತೋರಿಸುವದು.

“ಬಸವಣ್ಣನವರು ಕೈ ಹಿಡಿದು ಧೈರ್ಯವನ್ನೂ ತಿಳಿವಳಿಕೆಯನ್ನೂ ತುಂಬ ನೈಜಶಕ್ತಿಯನ್ನೂ ನೈಜಸ್ವರೂಪವನ್ನೂ ತಿಳಿಯಪಡಿಸಿದ್ದರಿಂದ ಅನೇಕರಲ್ಲಿ ಚಿಜ್ಯೋತಿಯು ಬೆಳಗಿ ಅಜ್ಞಾನಾಂಧಕಾರವು ತೊಲಗಿತು. ಕರ್ಮಪಾಶಗಳು ಉರಿದುಹೋದವು. ಈ ಮಾನವ ಶರೀರದಲ್ಲಿ ಅಡಗಿರುವ, ನಾನಾ ಕರ್ಮ ಬಂಧನಗಳಿಂದ ಬಿಗಿವಡೆದಿರುವ, ಅನೇಕ ದೌರ್ಬಲ್ಯಗಳಿಂದ ಕುಗ್ಗಿ ಹೋಗಿರುವ, ಅಂತರಾತ್ಮನನ್ನು ಅವರು ಹೀಗೆ ಬಿಡುಗಡೆ ಮಾಡಿದರು. ಆ ಅಂತರಾತ್ಮನನ್ನು ಸ್ವಯಂಪ್ರಕಾಶಕನೆಂಬುದು ಲಕ್ಷಾಂತರ ಜನಗಳಿಗೆ ಗೋಚರಿಸಿತು. ಅವರೆಲ್ಲರೂ ಭೂಲೋಕದಲ್ಲಿದ್ದು ಮುಕ್ತಜೀವರಾದರು. ಆ ಮಹಾನುಭಾವರೆಲ್ಲರೂ ತಾವು ಕಂಡುಕೊಂಡ ಸತ್ಯವನ್ನು ಇಲ್ಲಿ ಪ್ರಸಾರಮಾಡತೊಡಗಿದರು... ತಮ್ಮಲ್ಲಿದ್ದ ಅವಲೋಹವನ್ನು ಕಳೆದು ಅಪರಂಜಿಗಳನ್ನಾಗಿ ಮಾಡಿದ 'ಬಸವಣ್ಣನವರಿಗೆ, ಅವರು ಕೃತಜ್ಞರಾಗಿರರೇಕೆ !... ನೂರಾರು ವರ್ಷಗಳಾದರೂ ಲಕ್ಷಾಂತರ ಜನರ ಮೇಲೆ ಬಸವಣ್ಣನವರ ಪ್ರಭಾವಮುದ್ರೆಯು ಮಾಸದಿರಬೇಕಾದರೆ, ಆ ಮಹಾನುಭಾವರಲ್ಲಿ ಅದ್ಭುತ ಮೂರ್ತಿಸ್ವರೂಪವಿದ್ದಿರಬೇಕು. ಅವರಲ್ಲಿ ದಿವ್ಯ ತೇಜಸ್ಸು ಇದ್ದಿರಬೇಕು.

“ಬಸವಣ್ಣನವರ ಜೀವನ ಚರಿತ್ರೆಯು ಇಂತಹದು. ಅಭಿಮಾನಶಾಲಿಗಳಾದ ವೀರಶೈವ ಮಹಾಜನಗಳು ಬಸವಣ್ಣನವರನ್ನು ಕೇವಲ ನಂದೀಶ್ವರನ ಅವತಾರವೆಂದು ಭಾವಿಸಲಿ, ಅಭಿಜ್ಞರು ಅವರನ್ನು