ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
107


ಸಿರ ಹರಿದು ಅಟ್ಟಿ ನೆಲಕ್ಕೆ ಬಿದ್ದರೆ
ನಾಲಗೆ ಕೂಡಲಸಂಗಾ, ಶರಣೆ” ನ್ನು ತಿದ್ದಿತಯ್ಯಾ !

ಇದಾಯಿತು ಸಂಗನು ತನುವನಲ್ಲಾಡಿಸಿದಾಗಿನ ಬಸವಣ್ಣನವರ ನಿರ್ಭಯ ನಿಲುಮೆಗೆ ಬಗೆ, ಲೋಕನಿಂದೆಯು, ಶರಣರ ಮತ್ಸರವು ಬಸವಣ್ಣನವರ ಮನಸ್ಸನ್ನು ಅಲ್ಲಾಡಿಸಲು ಯತ್ನಿಸಿತು. ಆದರೂ ಅವರು ಅದಕ್ಕೆ ಸೊಪ್ಪು ಹಾಕಲಿಲ್ಲ. 'ಭವಿ ಬಿಜ್ಜಳನನ್ನು ಅವರು ಓಲೈಸಿಹರು ಎಂದು ನಿಂದಿಸಿದರು ಶರಣರು. ನಾನದನ್ನು ಮಾಡಿದುದು ಸಂಗನ ನೆನಪಿಗಾಗಿ, ನನ್ನ ಒಡಲಿಗಾಗಲ್ಲ ಎಂದು ಅವರಿಗೆ ಉತ್ತರವಿತ್ತರು ಬಸವಣ್ಣನವರು. ಬಿಜ್ಜಳನ ಭಂಡಾರವನ್ನು ಬರಿದಾಗಿಸಿ ಜಂಗಮರನ್ನು ಆರಾಧಿಸಿದ ಎಂದು ಹಳಿದರು ಅವರ ನಿಂದಕರು, “ಸಂಗಮದೇವಯ್ಯನುಳ್ಳನಕ್ಕ ಬಿಜ್ಜಳನ ಭಂಡಾರವೆನಗೇಕಯ್ಯಾ? ಎಂದು ಖಂಡತುಂಡಾಗಿ ಹೇಳಿದರು ಬಸವಣ್ಣನವರು, ಬಸವಣ್ಣನವರ ಭಕ್ತಿಯ ವೈಭವವನ್ನು ಕಂಡು ಅನೇಕರ ಹೊಟ್ಟೆಯಲ್ಲಿ ಮತ್ಸರದ ಕಿಚ್ಚು ಉರಿಯತೊಡಗಿತು. 'ಮಚ್ಚರಿಸಿದರೇನು ಮಾಡಲಾಪರು ಎನ್ನ ಅಚ್ಯುತ, ನಿನ್ನಯ ಕೃಪೆ ಇರಲು? ಕಿಚ್ಚಿಗೆ ಇರುವೆ ಮುತ್ತುವವೇ? ಎಂದು ದಾಸರಾಯರು ಉಸುರಿದ ಮೇರೆಗೆ ಬಸವಣ್ಣನವರು ಕೂಡ,

ಆರು ಮುನಿದು ನಮ್ಮನೇನು ಮಾಡುವರು?
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲದೆ?

ಎಂದು ಕೇಳಿದರು.
ಇನ್ನು ಧನವನಲ್ಲಾಡಿಸಿದ ವಿಷಯ. ಬಸವಣ್ಣನವರ ಔದಾರ್ಯದ ಕೀರ್ತಿಯನ್ನು ಕೇಳಿದ ಜಂಗಮರು ಅವರನ್ನು ಪರಿಪರಿಯಾಗಿ ಬೇಡಿ ಕಾಡಿದರು. ಸಿಕ್ಕದ್ದನ್ನು ಬೇಡಿದರು. ಕಂಡಕಂಡದ್ದನ್ನು ಬೇಡಿದರು. ಅದನ್ನೆಲ್ಲ ಬಸವಣ್ಣನವರು ಅವರಿಗೆ ನೀಡಲೆತ್ನಿಸಿದರು. ಕೊನೆಗೆ ಕೆಲ ಮಿಂಡ ಜಂಗಮರು ಅವರ ಪತ್ನಿಯನ್ನು ಬೇಡಲು ಕೂಡಾ ಹಿಂಜರಿಯಲಿಲ್ಲ, ಹೇಸಲಿಲ್ಲ. ಅವಳನ್ನು ಕೊಡಲು ಅವರು ಸಿದ್ಧರಾದಾಗ ಸಂಗನು ಅವರ ಮರ್ಯಾದೆಯನ್ನು ಉಳಿಸಿದ. ಕಳ್ಳರು ಅವರ