ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
105

ಕಂಡಂತೆ' ಅವರಿಗೆ ಹರುಷ ಆಯಿತು. ತಮಗವರ ಬರವಿನಿಂದುಂಟಾದ ಆನಂದಾತಿರೇಕವನ್ನು ಅವರು ಈ ರೀತಿ ಬಣ್ಣಿಸಿರುವರು :
ಸಾಸವೆಯ ಮೇಲೆ ಸಾಗರವರಿದಂತಾಯಿತ್ತಯ್ಯಾ
ಆನಂದದಿಂದ ನಲಿನಲಿದಾಡುವೆ,
ಆನಂದದಿಂದ ಕುಣಿಕುಣಿದಾಡುವೆ,
ಕೂಡಲಸಂಗನ ಶರಣರು ಬಂದರೆ,
ಉಬ್ಬಿ ಕೊಬ್ಬಿ ಹರುಷದಲೋಲಾಡುವೆ!
ಅಗ್ನಿ ದಿವ್ಯ :
ಮೇಲ್ಕಾಣಿಸಿದ ಮೇರೆಗೆ ಮಾಯೆಯ ಮೆರುಗಿನ ಸೆಳೆತದ ಫಲವಾಗಿ ಉಂಟಾದ ನೈತಿಕ ಕಳವಳದ ಕಡಲೊಳಗಿಂದ ಹಾದು ಬಸವಣ್ಣನವರು ಶರಣರ ಪಾವನನೆರೆಯಲ್ಲಿ ಕೆಲಕಾಲ ತಮ್ಮ ಸಾಧನವನ್ನು ಸಮಾಧಾನದಿಂದ ಸಾಗಿಸಿದರು. ಆದರೆ ಬೇಗನೆ ಇನ್ನೊಂದು ಅಗ್ನಿದಿವ್ಯವನ್ನು ಅವರು ಎದುರಿಸಬೇಕಾಯಿತು. ಪರಶಿವನು ಈ ಚೊಕ್ಕ ಚಿನ್ನವನ್ನು ಮರಳಿ ಅಗ್ನಿಯಲ್ಲಿ ಎಸೆದು ಪರೀಕ್ಷಿಸಿ, ಅದರ ಮೆರುಗನ್ನು ಕಾಂತಿಯನ್ನು ಬೆಳೆಸಲು ಹವಣಿಸಿದನು. ಅವನು ಬಸವಣ್ಣನವರ ತನುವನಲ್ಲಾಡಿಸಿ ನೋಡಿದ, ಮನವನಲ್ಲಾಡಿಸಿ ನೋಡಿದ, ಧನವನಲ್ಲಾಡಿಸಿ ನೋಡಿದ. ಆದರೆ ತಮ್ಮಲ್ಲಿಯ ಛಲದ ಬಲದಿಂದ ಬಸವಣ್ಣನವರು ಅದನ್ನು ಯಶಸ್ವಿಯಾಗಿ ಎದುರಿಸಿದರು :
ಬೇಡು ಬೇಡಲೆ ತಂದೆ ಬೇಡಿದ್ದ ನೀಡುವೆನು.
ತನುವ ಬೇಡಿದಡೀವೆ ; ಮನವ ಬೇಡಿದಡೀವೆ.
ಧನವ ಬೇಡಿದಡೀವೆ.
ಎಂದು ಅವರು ಬೇಡಿದ್ದನ್ನು ನೀಡಲು ಸಿದ್ಧರಾದರು, ನೀಡಿದರು. ಭಕ್ತಿ ಕಂಪಿತನಾದ ಭಗವಂತ ಅದರಿಂದ ಪ್ರೀತನಾದ ಅವರಿಗೆ ಅನನ್ಯತೆಯನ್ನು ದಯಪಾಲಿಸಿದ. ಅದರ ವಿವರಗಳು ಸಾಕಷ್ಟು ತಿಳಿದಿಲ್ಲ, ಅವರ ವಚನಗಳಲ್ಲಿಯ ಸೂಚಕ ನಿರ್ದೇಶಗಳಿಂದ ಕೆಲವನ್ನು