ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
111

ಅನುಭವವು ಬರತೊಡಗುವುದು. ನಾದವೆಂದರೆ ಧ್ವನಿ, ಬಿಂದುವೆಂದರೆ ರೂಪ, ಹಾಗೂ ಕಳೆ ಅಂದರೆ ಬೆಳಕು. ಇವೆಲ್ಲ ಅತೀಂದ್ರಿಯವಾದವು. ಇವೇ ಬರಬರುತ್ತ ಬೆಳೆದು ಸಾಧಕನಲ್ಲಿ ಆನಂದ, ಪರವಶತೆ ಮತ್ತು ಸಾಮರಸ್ಯಗಳನ್ನು ಹುಟ್ಟಿಸುವವು. ಬಸವಣ್ಣನವರ ಕೆಲ ವಚನಗಳಲ್ಲಿ ಇವುಗಳ ಕುರುಹುಗಳನ್ನು ಕಾಣಬಹುದು. ಇವು ಕೂಡ ಅವರ ಇಡಿ ಅನುಭಾವದ ಆಳ, ಅಗಲ, ಎತ್ತರಗಳನ್ನು ಅರುಹಬಲ್ಲವು.
ತಮಗೆ ಲಭಿಸಿದ ರೂಪದ ಅನುಭವವನ್ನು ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :

ಎತ್ತೆತ್ತ ನೋಡಿದತ್ತತ್ತ ನೀನೇ ದೇವಾ :
ಸಕಲ ವಿಸ್ತಾರದ ರೂಹು ನೀನೇ, ದೇವಾ ;
ವಿಶ್ವತೋಚುಕ್ಷು ನೀನೇ ದೇವಾ, ವಿಶ್ವತೋಮುಖ ನೀನೇ ದೇವಾ;
ವಿರತೋಬಾಹು ನೀನೇ ದೇವಾ
ವಿಶ್ವತೋಪಾದ ನೀನೇ ದೇವಾ ; ಕೂಡಲಸಂಗಮದೇವಾ,
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ;
ಪಾತಳದಿಂದತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತತ್ತ ನಿಮ್ಮ ಶ್ರೀಮುಕುಟ.
ಅಗಮ್ಯ ಅಗೋಚರ ಅಪ್ರತಿಪ ಲಿಂಗವೆ,
ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ!


ತಮ್ಮ ಅನಾಹತ ನಾದದ ಸ್ವರೂಪವನ್ನು ಬಸವಣ್ಣನವರು ಈ ಬಗೆಯಾಗಿ ಬಣ್ಣಿಸಿರುವರು :

ಸುನಾದ ಬಿಂದು ಪ್ರಣವಮಂತ್ರ ಅಗ್ರದ ಕೊನೆಯಲೈದುವುದೆ;
'ಸೋಹಂ'೨೭ ಸೋಹಂ' ಎಂದೆನುತಿದ್ದಿತ್ತು;
'ಕೋಹಂ' ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ;


೨೭. 'ಸೋಹಂ' ಎಂಬುದು ಅನುಭಾವ; 'ದಾಸೋಹಂ' ಎಂಬುದು ವೃತ್ತಿ ಒಂದು ಸಾಧ್ಯ ಇನ್ನೊಂದು ಸಾಧನ.