ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

130

ಬೆಣ್ಣೆಯು ಕರಗಿದರೆ, ಅನ್ಯರಿಗೆ ತಗಲಿದ ತಾಪದಿಂದ ಶರಣರ ಹೃದಯವು ಕರಗುವುದು. ಆದರೆ ಅದು ಅದು ಹೂವಿಗಿಂತ ಮಿದುವಾದುದಾದರೂ, ಹರಳಿಗಿಂತ ಬಿರುಸಾದುದೂ ಇರುವುದು ಎಂಬುದನ್ನು ಮರೆಯಲೇ ಕೂಡದು. ಆದುದರಿಂದ ಅವರೊಡನೆ ಭಕ್ತಿಭಾವದಿಂದಲೆ ನಡೆಯಬೇಕಲ್ಲದೆ ಅಂಥವರಲ್ಲಿ ಸಲಿಗೆಯ ಸರಸ ಸಲ್ಲದು. ಅದು ಕೂಡಲೇ ವಿರಸಕ್ಕಿಳಿಯದಿರದು. ಬಸವಣ್ಣನವರು ಇದನ್ನು ಕುರಿತು ಈ ಬಗೆಯ ಎಚ್ಚರಿಕೆಯನ್ನಿತ್ತಿರುವರು :

ಹಾವಿನ ಹೆಡೆಗಳ ಕೊಂಡು ಕೆನ್ನೆಯ ತುರಿಸುವಂತೆ
ಉರಿವ ಕೊಳ್ಳಿಯ ಕೊಂಡು ಮಂಡೆಯ ಸಿಕ್ಕ ಬಿಡುವಂತೆ
ಹುಲಿಯ ಮೀಸೆಯ ಹಿಡಿದುಕೊಂಡು
ಒಲಿದುಯ್ಯಲೆಯಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣದ ಕಲ್ಲು ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ.

ಶರಣ- ಭಗವಂತರಲ್ಲಿ ಸಾಮರಸ್ಯ ಉಂಟಾಗಿರುವ ಮೂಲಕ ಅವರ ಜೀವನವು ಭಗವದ್ಭರಿತವಾಗುವುದು. ಅದನ್ನು ಬಸವಣ್ಣನವರು ಈ ರೀತಿ ಬಣ್ಣಿಸಿರುವರು :

ಶರಣ ನಿದ್ರೆಗೈದರೆ ಜಪ ಕಾಣಿರೊ,
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ!
ಶರಣ ನಡೆದುದೆ ಪಾವನ ಕಾಣಿರೋ
ಶರಣ ನುಡಿದುದೆ ಶಿವತತ್ವ ಕಾಣಿರೋ
ಕೂಡಲಸಂಗನ ಶರಣರ
vಕಾಯಕವೇ ಕೈಲಾಸ ಕಾಣಿರೋ!

ಶರಣ ಶಿಖಾಮಣಿಗಳಾದ ಪ್ರಭುದೇವರು ತಮ್ಮ ಒಂದು ವಚನದಲ್ಲಿ ಇಂಥ ಶರಣರೇ ನಿಜವಾದ ಜಗುದುದ್ಧಾರಕರು ಎಂದು ಸಾರಿರುವರು. ಬಸವಣ್ಣನವರಂತೆ ಅವರ ನುಡಿಯೂ ಸ್ವಂತ ಅನುಭಾವದ ಆಳದಿಂದ ಹೊರಹೊರಟ ಮೂಲಕ ತುಂಬ ಅಮೂಲ್ಯ