ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
119

ಶರಣರ ಮಾರ್ಗದರ್ಶನ :
ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಶರಣರೇ ಗುರುಗಳಾಗಿ ಮತ್ತು ಜಂಗಮರಾಗಿ ಭಕ್ತರನ್ನು ಅನುಗ್ರಹಿಸಿ ಅವರಿಗೆ ಅದನ್ನರಿವ ದಾರಿಯನ್ನು ಸಾಧನವನ್ನು ಅರುಹುವರು. 'ಹರ ತನ್ನೊಳಿರ್ದು ಗುರು ತೋರದೆ ತಿಳಿವುದೆ? ಎಂದು ಸರ್ವಜ್ಞ ಕೇಳುವ, 'ಗುರುವಿಲ್ಲದೇ ಕುರುಹಿಲ್ಲದಾ? ಎಂದು ಬೇರೋಬ್ಬ ಶರಣರು ಕೇಳಿರುವರು. “ಶಿವಪಥವನರಿವಡೆ ಗುರುಪಥವೆ ಮೊದಲು. ಸಂಗಮದೇವರನರಿವಡೆ, ಶರಣರ ಸಂಗವೇ ಮೊದಲು ಎಂದು ಅರುಹಿರುವರು ಬಸವಣ್ಣನವರು.
ಗುರೂಪದೇಶ ಮಂತ್ರವೈದ್ಯ:
ಜಂಗಮೋಪದೇಶ ಶಸ್ತ್ರವೈದ್ಯ ನೋಡಾ,
ಭವರೋಗವ ಗೆಲುವ ಪರಿಯ ನೋಡಾ.
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ.
ಸದ್ಗುರು ಅನುಗ್ರಹಿಸಿದ ಮಂತ್ರದಿಂದ ಭವಬಾಧೆ ಅಳಿಯುವದು, ಪರತತ್ತ್ವ ಹೊಳೆಯುವದು. ಶರಣರ ದಿವ್ಯ ಅನುಭಾವವು ಅವರ ಸಹವಾಸದಲ್ಲಿರುವ ಭಕ್ತರ ಕಲ್ಮಲಗಳನ್ನೆಲ್ಲ ಅಳಿಸಿ ಆತನನ್ನು ಪರಿಶುದ್ದಗಳಿಸುವದು.
<pem>ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯಾ;
ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯಾ;
ಕೂಡಲಸಂಗನ ಶರಣರ ಅನುಭಾವದಿಂದ
ಎನ್ನ ಮನದ ಕೇಡ ನೋಡಯ್ಯಾ!
ಇಂಥ ಸಾಮರ್ಥ್ಯ ನೆಲೆಸಿರುವದು ಶರಣರ ಅನುಭಾವದಲ್ಲಿ ಆದುದರಿಂದ ಅವರ ಸಂಗದಿಂದ ಕರ್ಮದ ಕಲ್ಮಷ ಕಳೆದು ಭಕ್ತನು