ವಿಷಯಕ್ಕೆ ಹೋಗು

ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

128
ಮನ ಮನ ಬೆರೆಸಿದಲ್ಲಿ ತನು ಕರಗಬೇಕು. ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮಬೇಕು. ಕಂಗಳಲ್ಲಿ ಅಶ್ರುಜಲಂಗಳು ಸುರಿಯಬೇಕು. ಇದೇ ಉತ್ಕಟಭಕ್ತಿಯ ಹಿರಿದಾದ ಕುರುಹು. ಇಂಥ ಭಕ್ತಿಯೇ ಭಗವಂತನ ಕರುಣವನ್ನು ಪಡೆಯಬಲ್ಲುದು. ಆತನ ದಿವ್ಯರೂಪವನ್ನು ಕಾಣಿಸಬಲ್ಲದು. ಆತನ ಪರಮಾನಂದವನ್ನು ಉಣಿಸಬಲ್ಲದು.
ಆದರ್ಶ ಜೀವನ :
ಈ ಬಗೆಯ ದಿವ್ಯ ಅನುಭಾವ- ಆನಂದಗಳನ್ನು ಪಡೆದ ಶರಣರ ಪಾವನ ಜೀವನವೇ ನಿಜವಾದ ಆದರ್ಶಜೀವನ, ಸದೈವ ಆತ್ಮಾನಂದದಲ್ಲಿ ಮುಳುಗಿರುವ ಮೂಲಕ ಶರಣನು ನಿರ್ಭಯನಿರುವ, ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚ ನ. ಬ್ರಹ್ಮಾನಂದವನ್ನು ಪಡೆದವನು ಏತರಿಂದಲೂ ಭಯ ಪಡುವದಿಲ್ಲ. ಅವನು ಧೀರನಿರುವ, ವೀರನಿರುವ !
ಎಲ್ಲರೂ ವೀರರು, ಎಲ್ಲರೂ ಧೀರರು :
ಎಲ್ಲರೂ ಮಹಿಮರು, ಎಲ್ಲರೂ ಪ್ರಥಮರು.
ಕಾಳಗದ ಮುಖದಲ್ಲಿ ಕಾಣಬಾರದು,
ಓಡುವ ಮುಖದಲ್ಲಿ ಕಾಣಬಹುದು !
ನಮ್ಮ ಕೂಡಲಸಂಗನ ಶರಣರು ಧೀರರು,
ಉಳಿದವರೆಲ್ಲಾ ಅಧೀರರು !
ಶರಣರು ಅಳಿಯದ ಆನಂದವನ್ನೇ ಸೇವಿಸುತ್ತಿರುವುದರಿಂದ ಅವರಲ್ಲಿ ಬೇರಾವ ಕಾಮನೆಯೂ ಇರುವುದಿಲ್ಲ. ಅವರು 'ಕಾಮವ ತೊರೆವರು, ಹೇಮವ ಜರೆವರು !' ಅವರಲ್ಲಿ ಮಾನವಸಹಜವಾದ ಯಾವ ಕಾಮನೆಯೂ ನೆಲೆಸಿ ಇರುವುದಿಲ್ಲ. 'ಆಪ್ತಕಾಮೋ ಅವಾಪ್ತಕಾಮೋ ಆತ್ಮಕಾಮೋ ಅಕಾಮೋ ಭವತಿ.' ಆತ್ಮಕಾಮರು ಆತ್ಮನನ್ನೇ ಪಡೆದು ಅಕಾಮರಾಗುವರು. ಅವರು ಮರಳಿ ಕಾಮಜಾಲದಲ್ಲಿ ಸಿಲುಕುವದಿಲ್ಲ. ಆದುದರಿಂದ ಅವರ,