ವಿಷಯಕ್ಕೆ ಹೋಗು

ಪುಟ:ವಾಗರ್ಥ ಗೌರವ.pdf/೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂಪಾದಕೀಯ

ಮಿತ್ರ, ಕಲಾವಿದ, ಕಲಾಭಿಜ್ಞ ಡಾ. ಎಂ. ಪ್ರಭಾಕರ ಜೋಶಿಯವರಿಗೆ ಎಪ್ಪತ್ತು ತುಂಬಿದ ಸಂದರ್ಭದಲ್ಲಿ ಅವರು ಯಕ್ಷ ಪ್ರಪಂಚಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಂಡು ಅವರನ್ನು ಮೈಸೂರಿನಲ್ಲಿ ಅಭಿನಂದಿಸಬೇಕೆಂದು ಮೈಸೂರಿನ ಅವರ ಅಭಿಮಾನಿ ಬಳಗವೊಂದು ನಿರ್ಧರಿಸಿತು. ಕೂಡಲೆ ಕಾರ್ಯತತ್ಪರವಾದ ಆ ಬಳಗ ಜೋಶಿಯವರ ಹೆಸರಿನಲ್ಲಿ ಅಭಿನಂದನಾ ಸಮಿತಿಯನ್ನು ರಚಿಸಿತು. ಅದಕ್ಕೆ ನನ್ನನ್ನೇ ಕಾರ್ಯದರ್ಶಿಯನ್ನಾಗಿ ನೇಮಿಸಿತು. ಗೌರವಾಧ್ಯಕ್ಷರಾಗಿ ಎಸ್.ಬಿ.ಎಂ.ನ ನಿವೃತ್ತ ಮ್ಯಾನೇಜರ್ ಸೀತಾರಾಮ ಭಟ್ ದಾಮ್ಲೆ ಅವರೂ, ಅಧ್ಯಕ್ಷರಾಗಿ ಖ್ಯಾತ ಉದ್ಯಮಿ ಎಂ. ಬಾಲಚಂದ್ರ ಡೋಂಗ್ರೆ ಅವರೂ ಉಪಾಧ್ಯಕ್ಷರಾಗಿ ಇನ್ನೋರ್ವ ಖ್ಯಾತ ಉದ್ಯಮಿ ಡಾ. ಸುಧೀರ ಶೆಟ್ಟಿ ಅವರೂ, ಖಜಾಂಚಿಯಾಗಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರ್ ರಘುಪತಿ ತಾಮ್ಹಣ್‌‌ಕರ್ ಅವರೂ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವೇಣುಗೋಪಾಲ ದೇವಧರ್, ಕೆ. ಶ್ರೀಕರ ಭಟ್, ಮರಾಠೆ, ಶ್ರೀಮತಿ ವೀಣಾ ಡೋಂಗ್ರೆ, ಡಾ. ಗೋಪಾಲ ಮರಾಠೆ ಕೆ. ಹಾಗೂ ಕೆ.ಬಿ. ಪುರುಷೋತ್ತಮ ಗೌಡ ನೇಮಕಗೊಂಡರು.

ಜೋಶಿಯವರ ಬಗ್ಗೆ ಅಪಾರ ಅಭಿಮಾನವಿಟ್ಟುಕೊಂಡಿದ್ದ ನನಗೆ ಅವರ ಕುರಿತಾಗಿ ಕೆಲಸ ಮಾಡುವುದಕ್ಕೆ ಇದೊಂದು ಸಂದರ್ಭವೆಂದು ಭಾವಿಸಿ ಮಾಡಬೇಕಾದ ಕೆಲಸಗಳ ಯೋಜನೆಯನ್ನು ಸಮಿತಿ ಮುಂದೆ ಇಟ್ಟೆ. ಸಮಿತಿಯ ಎಲ್ಲ ಪದಾಧಿಕಾರಿಗಳೂ, ಸದಸ್ಯರೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಮಾತ್ರವಲ್ಲ ಎಲ್ಲರೂ ತಮ್ಮ ತಮ್ಮ ಮಿತಿಯಲ್ಲಿ ಯಥಾಶಕ್ತಿ ಆರ್ಥಿಕ ನೆರವನ್ನು ನೀಡಿದರು.