ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸತ್ವ, ತಿರುಳು ಎನ್ನುತ್ತೇವೆಯೋ ಅವೆಲ್ಲವೂ ಅವರ ವ್ಯಕ್ತಿತ್ವದಲ್ಲಿವೆ. ಅವರ ಪೂರ್ತಿ ಕೃತಿಗಳಲ್ಲಿವೆ.
'ಜಾಗರದ ಜೋಶಿ' ಕೃತಿ ಜೋಶಿಯವರ ಬಗೆಗಿನ ವಿಶಿಷ್ಟ ಕೃತಿ. ಅವರ ವ್ಯಕ್ತಿತ್ವದ ವಿಸ್ತಾರ, ಆಳ, ಅಗಲ, ಎತ್ತರಗಳನ್ನು ವಿವರವಾಗಿ ಬಿತ್ತರಿಸಿದೆ. ಸಾಮಾನ್ಯವಾಗಿ ಅಭಿನಂದನ ಕೃತಿಗಳು, ವ್ಯಕ್ತಿಗಳ ಕುರಿತಾದ ಬರಹಗಳು ವಿಮರ್ಶೆಗಿಂತ ಹೆಚ್ಚು ವೈಭವೀಕರಣದಿಂದ ಕೂಡಿರುತ್ತದೆ. ಆದರೆ ಇಲ್ಲಿ ಹಾಗಿಲ್ಲ. ಜೋಶಿಯವರ ಭಾವ, ಪ್ರಭಾವ, ವೃತ್ತಿ, ಪ್ರವೃತ್ತಿ, ಬಾಲ್ಯ, ಬದುಕು, ಬಂಧ ಸಂಬಂಧಗಳ ಬಗ್ಗೆ ಇಲ್ಲಿಯ 14 ಲೇಖನಗಳ ಮೂಲಕ ಕಟ್ಟಿಕೊಡಲಾಗಿದೆ. ಅದರೊಂದಿಗೆ ಸ್ಥಿರೀಕರಣ, ಪರಿಷ್ಕರಣ, ವಿಸ್ತರಣ ಎಂಬ ಜೋಶಿಯವರ ಚಿಂತನೆಯ ಲೇಖನ, ಇನ್ನೂ ವಿಶೇಷ ವೇನೆಂದರೆ ಪ್ರೊ. ಬಿ.ಎ. ವಿವೇಕ ರೈ, ಪ್ರೊ. ಅಮೃತ ಸೋಮೇಶ್ವರ, ಕು.ಶಿ. ಹರಿದಾಸ ಭಟ್ ಮುಂತಾದ ಶತಮಾನದ ಚಿಂತಕರನ್ನೊಳಗೊಂಡ ಹತ್ತು ಮುನ್ನುಡಿಯ ನುಡಿಗಳು ಯಕ್ಷಲೋಕಕ್ಕೆ ಮಾತ್ರವಲ್ಲ ಸಾಹಿತ್ಯ ಲೋಕದ ಜಾಗರದ ನುಡಿಗಳಾಗಿವೆ. ಪ್ರೊ. ಬಿ.ಎ. ವಿವೇಕ ರೈಗಳು ಹೇಳಿದ ಮುನ್ನುಡಿಯ ಮಾತನ್ನು ಇಲ್ಲಿ ಉಲ್ಲೇಖಿಸುವುದು ಅಗತ್ಯ - “ಡಾ. ಜೋಶಿಯವರು ತತ್ತ್ವಶಾಸ್ತ್ರಗಳ ವಿಮರ್ಶಾತ್ಮಕ ಅಧ್ಯಯನದ ಮೂಲಕ ಕನ್ನಡದ ಒಬ್ಬ ವೈಚಾರಿಕ ವಿದ್ವಾಂಸರಾಗಿಯೂ ಮುಖ್ಯರಾಗಿ ದ್ದಾರೆ. ಸಾಹಿತ್ಯ, ಕಲೆ, ಜಾನಪದ, ರಂಗಭೂಮಿ, ಮೀಮಾಂಸೆಯ ಕ್ಷೇತ್ರಗಳನ್ನು ಅಂತರ ಶಿಸ್ತೀಯ ನೆಲೆಯಿಂದ ಅಧ್ಯಯನ ಮಾಡಿದ ಮತ್ತು

ಇಂದಿಗೂ ಈ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಯಾಗಿ ಇರುವ ಡಾ. ಎಂ. ಪ್ರಭಾಕರ ಜೋಶಿಯವರು ಕರ್ನಾಟಕದದ ಬಹುಶ್ರುತ ವಿದ್ವಾಂಸರು.”
'ವಾಗರ್ಥ ಗೌರವ' ಡಾ. ಎಂ. ಪ್ರಭಾಕರ ಜೋಶಿಯವರ 70ರ ಅಭಿನಂದನ ಗ್ರಂಥ. ಇಲ್ಲಿ ಅಂದಿನ ಕಾರ್ಯಕ್ರಮದ ಉದ್ಘಾಟನಾ ಭಾಷಣದಿಂದ ತೊಡಗಿ ಸಂದೇಶ ಸ್ಪಂದನದ ವರೆಗೆ ವಿವಿಧ ವಿದ್ವಾಂಸರು ಮಂಡಿಸಿದ ಜೋಶಿಯವರ ಬಗೆಗಿನ ವ್ಯಕ್ತಿ ವಿಮರ್ಶೆಗಳಿವೆ. ಅಂದಿನ ಅಧ್ಯಕ್ಷ ಭಾಷಣದಲ್ಲಿ ಡಾ. ಕೆ.ಎಂ. ರಾಘವ ನಂಬಿಯಾರ್ ಜೋಶಿಯವರ ಕೊಡುಗೆ ಏನು ಎಂದು ಕೇಳಿದರೆ “ಈ ರಂಗಕ್ಕೆ ಅರ್ಥಶಾಸ್ತ್ರ, ತತ್ತ್ವಶಾಸ್ತ್ರ ಸಹಿತ ಜ್ಞಾನದ ಹಲವು ಶಾಖೆಗಳ ಪರಿಜ್ಞಾನವನ್ನು ಆವರಣ ಭಂಗವಿಲ್ಲದೆ ನೀಡಿದ ಸಾಧನೆ ಎನ್ನಬಹುದು. ಅದು ಶೈಕ್ಷಣಿಕಬಾಗಿ ಅವಲಂಬನೀಯ ಜ್ಞಾನದಾನ. ಬರಿಯ ಗಾಳಿ ಮಾತು ಯಕ್ಷಗಾನಕ್ಕೆ ಪರಿಷ್ಕಾರಯುತ ಭಾಷೆಯನ್ನು ನೀಡಿದವರಾಗಿಯೂ ಅವರನ್ನು ಪರಿಗಣಿಸಬೇಕು. ಎಲ್ಲಕ್ಕಿಂತ ಸದ್ಯ ರಂಗದಲ್ಲಿರುವ ಕಲಾವಿದರಲ್ಲಿ ತಾಂತ್ರಿಕವಾಗಿ ಅತ್ಯಂತ ಪರಿಪೂರ್ಣತೆ ಗಳಿಸಿರುವ ಅರ್ಥಧಾರಿ ಜೋಶಿಯವರು.”
ಎಲ್ಲಕ್ಕಿಂತ ಹೆಚ್ಚಾಗಿ ಡಾ. ಎಂ. ಪ್ರಭಾಕರ ಜೋಶಿಯವರ ಬಗ್ಗೆ, ಅವರ ಯೋಚನೆ ಯೋಜನೆ, ಅಪೂರ್ವ ಕೃತಿ ಡಾ. ಸುಂದರ ಕೇನಾಜೆ ಯವರ 'ಜೋಶಿ ಆಳ-ಮನದಾಳ ಇಲ್ಲಿ ಆಕೃತಿಯ ಕಲ್ಲೂರು ನಾಗೇಶರು ಹೇಳುವ ಮಾತುಗಳು ಇಡೀ ಕೃತಿಯ ಆಕೃತಿ. “ಜಗತ್ತು ಜಾಗತೀಕರಣದ ಎಷ್ಟೇ ಆಕರ್ಷಣೆಗೆ ಒಡ್ಡಿಕೊಂಡರೂ, ಕಲೆ ಮತ್ತು ಕಲಾವಿದರು ಪ್ರಬುದ್ಧ

34 / ಯಕ್ಷ ಪ್ರಭಾಕರ