ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೬
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೮೫



ಯನ್ನು ಸ್ವೀಕರಿಸಬೇಕು.
ಬಾದಶಹನು ಆಶ್ಚರ್ಯದಿಂದ ಆಮುದ್ರಿಕೆಯನ್ನು ಕೈಯಲ್ಲಿ ತೆಗೆದುಕೊಂಡು ನೋಡಿದನು. ಅದುತನ್ನದೇ ಆಗಿತ್ತು ಯಾವ ಮುದ್ರಿಕೆಯನ್ನು ನಾನು ಗಂಭೀರವಾದ ಯಮುನಾ ಪ್ರವಾಹದಲ್ಲಿ ಚಲ್ಲಿ ಕೊಟ್ಟಿದ್ದು ಈಗ ಇವನಿಗೆ ಹ್ಯಾಗೆ ದೊರಕಿತು ? ” ಎಂದು ಆಶ್ಚರ್ಯಪಡುತ್ತ, “ ಬೀರಬಲ್ಲ ! ನಿನಗೆ ಈ ಮುದ್ರಿಕೆಯು ಹ್ಯಾಗೆ ದೊರಕಿತು” ಎಂದು ಕೇಳಿದನು.
ಆಗ ಬೀರಬಲನು-ಪೃಥ್ವಿನಾಥ ! ನನ್ನ ಪ್ರಾರಬ್ಧವಶದಿಂದಲೇ ಲಭಿಸಿತು. ನನ್ನ ಪ್ರಾರಬ್ಬವು ಬಲವತ್ತರವಾಗಿರದಿದ್ದರೆ ಇದು ನನಗೆ ಹ್ಯಾಗೆ ದೊರಕುತ್ತಿತು ? ” ಎಂದು ನುಡಿದು ಯಾವತ್ತೂ ಸಮಾಚಾರವನ್ನು ತಿಳಿ ಸಿದನು. ಆಗ ಬಾದಶಹನಿಗೆ ಪರಮಾನಂದವಾಯಿತು. ಅದರಿಂದ ಅವನು ಬೀರಬಲನಿಗೆ ಹತ್ತು ಸಾವಿರ ಮೋಹರುಗಳನ್ನೂ ಬಹು ಮೂಲ್ಯವುಳ್ಳ ಒಂದು ಜರತಾರಿಯ ಕಾಲನ್ನೂ ಪಾರಿತೋಷಕವಾಗಿ ಕೊಟ್ಟು ಸನ್ಮಾನಿಸಿದನು. ಈವರ್ತಮಾನವು ನಗರದ ಯಾವತ್ತೂ ಭಾಗಗಳಲ್ಲಿ ಪಸರಿಸಿದ್ದರಿಂದ ನಗರ ವಾಸಿಗಳೆಲ್ಲರಿಗೂ ಪರಮಾನಂದವಾಯಿತು ಬಾದಶಹನು ಬೀರಬಲನ ಮನೆಯ ಜನರಿಗೆಲ್ಲ ಒಂದೊಂದು ವಸ್ತ್ರವನ್ನು ಉಡುಗರೆಯಾಗಿ ಕೊಟ್ಟು ಕಳಿಸಿದನು ಮತ್ತು ಎಲ್ಲ ಸಭಾಸದರ ಸಹಿತವಾಗಿ ಪ್ರಾರಬ್ಧವು ಶ್ರೇಷ್ಟವಾದದ್ದೆಂ ದು ಒಪ್ಪಿಕೊಂಡನು.

-(೩೦ ಈರ್ವರೂ ಕೂಡಿಕೊಂಡೇ ಬರುವೆವು,)-

ದಿಲ್ಲಿಯಲ್ಲಿದ್ದ ಇಬ್ಬರು ಮೋಸಗಾರರು ಒಬ್ಬ ಸಾವುಕಾರನನ್ನು ಮೋಸಗೊಳಿಸ ಬೇಕೆಂದು ಮೊದಲು ಬಹು ಮೂಲ್ಯವುಳ್ಳ ಕೆಲವು ಆಭರಣಗಳನ್ನು ತೆಗೆದುಕೊಂಡುಹೋದರು ಆಮೇಲೆ ಆವರ್ತಕನಿಗೆ ಆ ಆಭರಣಗಳನ್ನು ತೋರಿಸಿ “ನಾವು ಇವುಗಳನ್ನು ಮಾರಬೇಕೆಂದು ಬಂದಿದ್ದೇವೆ ಇವುಗಳನ್ನು ನೀವು ವಿಕ್ರಯ ಮಾಡಿಕೊಟ್ಟರೆ ನಮ್ಮ ಮೇಲೆ ಬಹಳೇ ಉಪಕಾರ ಮಾಡಿ ದಂತಾಗುತ್ತದೆ ” ಎಂದರು.
ಆ ಸಾವುಕಾರನು ಆ ಆಭರಣಗಳನ್ನೆಲ್ಲ ನೋಡಿ, “ ಒಳ್ಳೇದು ; ಇವುಗಳನ್ನು ನನ್ನ ಬಳಿಯಲ್ಲಿ ಇಟ್ಟು ಹೋಗಿರಿ ! ನಾಲ್ಕಾರು ಜನರಿಗೆ ತೋರಿಸಿ ಇದರ ಮೂಲ್ಯವನ್ನು ನಿಶ್ಚಯಿಸಿ ಇಟ್ಟಿರುತ್ತೇನೆ ನೀವು ನಾಳೆ ಮಧ್ಯಾಹ್ನ ಕಾಲದಲ್ಲಿ ಬರ್ರಿ ! ಎಂದು ಹೇಳಿದನು.
ಮೋಸಗಾರರು-ಈ ಆಭರಣಗಳನ್ನು ಇಟ್ಟುಕೊಳ್ಳಿರಿ ! ನಾವು ನಾಳೆ ಮ