ಪುಟ:ಪರಂತಪ ವಿಜಯ ೨.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೩೮

ಪರಂತಪ ವಿಜಯ


ಗೊಳಿಸಬೇಕೆಂದಿದ್ದೆನು. ನೀನು ಅನ್ಯಾದೃಶವಾದ ಸೌಂದರವುಳ್ಳವಳಾಗಿಯೂ ಅದಕ್ಕೆ ತಕ್ಕ ಗುಣಾತಿಶಯವುಳ್ಳವಳಾಗಿಯೂ ಇರುವೆ, ನನಗಿಂತಲೂ ರೂಪವಂತಾರಾಗಿಯೂ ವಿದ್ಯಾವಂತರಾಗಿಯೂ ಗುಣಾಢ್ಯರಾಗಿಯೂ ಇರತಕ್ಕ ಮಹಾತ್ಮರು ಲೋಕದಲ್ಲಿ ಎಷ್ಟೋ ಜನರಿರುವರು. ನೀನು ಅಂಥವರನ್ನು ವರಿಸಿ ಸಂತೋಷದಿಂದಿರಬಹುದೆಂದು ನಾನು ಹೀಗೆ ಹೇಳಿದೆನೇ ಹೊರತು ನೀನು ನನಗೆ ಅನುರೂಪಳಲ್ಲವೆಂಬುದಾಗಿಯೂ ನಿನಗಿಂತಲೂ ಹೆಚ್ಚಾದ ಬೆರೆ ಸ್ತ್ರೀಯು ನನಗೆ ದೊರಕುತ್ತಾಳೆಂಬ ಅಹಂಕಾರದಿಂದ ಹೇಳಿದವನಲ್ಲ. ಈಗಲೂ ಈ ವಿಷಯವನ್ನು ಚೆನ್ನಾಗಿ ಪರ್ಯಾಲೋಚಿಸು. ನೀನು ನನ್ನ ಆಪ್ತಳಾದ ಹೆಂಡತಿಯಾಗಿದ್ದರೆ ಹೇಗೋ- ಹಾಗೆಯೇ ನಿನ್ನ ವಿಷಯದಲ್ಲಿ ನಾನು ಮಾಡತಕ್ಕ ಸಹಾಯಗಳನ್ನೆಲ್ಲ ಮಾಡುವೆನು. ಈ ಸುಮಿತ್ರ ಶಂಬರರಿಂದ ಉಂಟಾಗಿರುವ ವಿಪತ್ತನ್ನು ತಪ್ಪಿಸುವೆನು. ತರುವಾಯ, ಪಾಣಿಗ್ರಹಣಾರ್ಥವಾಗಿ ನಿನ್ನನ್ನು ವರಿಸಬೇಕೆಂದು ಬರುವವರೆಲ್ಲರನ್ನೂ ಪರೀಕ್ಷಿಸು. ಅವರಲ್ಲಿ ನನಗಿಂತಲೂ ಉತ್ತಮರಾದವರು ಸಿಕ್ಕದಿದ್ದರೆ ನಾನೇ ನಿನ್ನನ್ನು ವರಿಸುತ್ತೇನೆ. ಈ ವಿಷಯದಲ್ಲಿ ಸಂದೇಹವಿಲ್ಲ. ಇದಕ್ಕಾಗಿ ನಿನಗೆ ಬೇಕಾದ ಪ್ರತಿಜ್ಞೆಗಳನ್ನು ಮಾಡಿಕೊಡುತ್ತೇನೆ. ಇನ್ನು ಮಃಖಿಸಬೇಡ.” ಎಂದು ಹೇಳಿದನು.
ಕಾಮಮೋಹಿನಿ - ಎಲೈ ಮಹನೀಯನೆ! ವಿವಾಹಕ್ಕೆ ಅನುರಾಗವೇ ಮುಖ್ಯವಾದುದು. ವಿದ್ಯಾವಂತರಾಗಿಯೂ ರೂಪವಂತರಾಗಿಯೂ ಇದ್ದ ಅನೇಕ ಸಹಸ್ರ ಜನರು, ನನ್ನ ವಿಚಾರವನ್ನು ಕೇಳಿ ಇಲ್ಲಿಗೆ ಬಂದು ಸುಮಿತ್ರನನ್ನು ಪ್ರಾರ್ಥಿಸಿದರು. ಅವರಲ್ಲಿ ಯಾರನ್ನೂ ನನ್ನ ಮನಸ್ಸು ಒಡಂಬಡಲಿಲ್ಲ. ಹೀಗಿರುವಲ್ಲಿ, ಶಂಬರನಿಗೆ ನನ್ನನ್ನು ಕೊಟ್ಟು ವಿವಾಹಮಾಡಬೇಕೆಂದು ಸುಮಿತ್ರನು ಪ್ರಯತ್ನ ಮಾಡಿದನು. ಈತನ ಪ್ರಯತ್ನಕ್ಕೆ ಪ್ರತಿಭಟಿಸುವುದಕ್ಕಿಂತ ದೇಹತ್ಯಾಗವನ್ನು ಮಾಡುವುದೇ ಉತ್ತಮವೆಂದು ನಿಷ್ಕರ್ಷೆ ಮಾಡಿ, ಈ ವಿಷವನ್ನು ತರಿಸಿಕೊಂಡೆನು. ನಿಶ್ಚಿತಾರ್ಥ ಕಾಲದಲ್ಲಿಯೇ ಈ ವಿಷವನ್ನು ತೆಗೆದುಕೊಳ್ಳಬೇಕೆಂದಿದ್ದೆನು. ಮಾಧವನ ಮರಣ ಸಮಾಚಾರ ಬಂದು ಈ ನಿಶ್ಚಿತಾರ್ಥೋತ್ಸವವು ನಿಂತುದುದರಿಂದಲೂ, ಮಾರನೆಯ ದಿವಸವೇ ನಿನ್ನ ದರ್ಶನ ಲಾಭವುಂಟಾಗಿ ಕ್ರಮಕ್ರಮವಾಗಿ ನೀನೇ ನನಗೆ ಅನು