ಪುಟ:ಕರ್ನಾಟಕ ಗತವೈಭವ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೧೨ನೆಯ ಪ್ರಕರಣ - ವೈಭವ-ವರ್ಣನೆ

೯೩


ಕಂಗೊಳಿಸುತ್ತವೆ, ಅರಮನೆಯ ಸಭಾಮಂಟಪವು ಇವೆಲ್ಲಕ್ಕೂ ಎತ್ತರವಾಗಿ ಭವ್ಯವಾಗಿರುತ್ತದೆ. ಪೇಟೆಯ ಬೀದಿಗಳು ಅತ್ಯಂತ ವಿಶಾಲವಾದವೂ ಉದ್ದವಾದವೂ ಇರುತ್ತವೆ. ಈ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಗುಲಾಬಿ ಹೂಗಳ ಸುಗ್ಗಿ, ಇಲ್ಲಿಯ ಜನರಿಗೆ ಅವುಗಳ ಮೇಲೆ ಬಲು ಪ್ರೀತಿ; ಊಟವಿಲ್ಲದಿದ್ದರೂ ಅವರಿಗೆ ಸಾಗೀತು, ಆದರೆ ಈ ಹೂವುಗಳಿಲ್ಲದೆ ಸಾಗುವುದಿಲ್ಲ. ಮುತ್ತು - ರತ್ನ, ಪಚ್ಚ- ವಜ್ರಗಳ ವ್ಯಾಪಾರವು ಪ್ರತಿ ನಿತ್ಯವೂ ನಡೆಯುತ್ತದೆ. ಎಲ್ಲಿ ನೋಡಿದರೂ, ಅಂದವಾದ ಕಲ್ಲುಗಳಿಂದ ಕಟ್ಟಲ್ಪಟ್ಟ ನೀರುಕಾಲುವೆಗಳು ಜುಳುಜುಳು ಹರಿಯುತ್ತವೆ. ಅರಮನೆಯಲ್ಲಿ ಅನೇಕ ನೆಲಮನೆಗಳುಂಟು. ಅವೆಲ್ಲವುಗಳಲ್ಲಿ ನಾಣ್ಯದ ಬೊಕ್ಕಸಗಳು ತುಂಬಿವೆ. ದಿವಾಣಖಾನೆಯ ಇದಿರಿಗೆ ಆನೆಯ ಸಾಲುಗಳು ಉಂಟು. ಪ್ರತಿಯೊಂದು ಆನೆಗೆ ನಿಲ್ಲಲಿಕ್ಕೆ ಒಂದು ದೊಡ್ಡ ಕಟ್ಟಡ ಇರುತ್ತದೆ. ಟಂಕಸಾಲೆಯ ಮುಂದೆ ಪಟ್ಟಣದ ಮುಖ್ಯಾಧಿಕಾರಸ್ಥನ ಮನೆಯುಂಟು. ಅಲ್ಲಿ ೧೨೦೦೦ ಕಾವಲುಗಾರರಿದ್ದಾರೆ.
ಅಬ್ದುಲರಜಕನು ಪಟ್ಟಣದಲ್ಲಿ ಒಮ್ಮೆ ಉತ್ಸವ ನಡೆದುದನ್ನು ನೋಡಿ, ಈ ರೀತಿಯಾಗಿ ವರ್ಣಿಸಿರುವನು.
"ರಾಯನ ಅಪ್ಪಣೆಯ ಮೇರೆಗೆ ರಾಜ್ಯದೊಳಗಿನ ಮುಖ್ಯ ಮುಖ್ಯ ಸರದಾರರೂ ರಾಜಪುತ್ರರೂ, ಚಕಚಕಿಸುವ ಅಂಬಾರೆಗಳನ್ನೊಡಗೂಡಿದ ಸಾವಿರಾರು ಆನೆಗಳನ್ನೇರಿ ಅರಮನೆಗೆ ಬಂದಿರುವರು. ಕೆಳಗಿನಿಂದ ಮೇಲ್ತುದಿಯವರೆಗೆ ಸುಂದರವಾದ ಚಿತ್ರಗಳಿಂದ ಮುಚ್ಚಿದ ೩-೪-೫ ಅಂತಸ್ತುಗಳುಳ್ಳ ಡೇರೆಗಳಲ್ಲಿ ಇವರು ಇಳಿದು ಕೊಂಡಿರುವರು. ಈ ಡೇರೆಯಲ್ಲಿ ಹಲವು ಡೇರೆಗಳು ತಿರುಗಿಸಿ ದತ್ತ ತಿರುಗುತ್ತವೆ. ಆ ಡೇರೆಯಲ್ಲಿ ಪ್ರತಿಯೊಂದು ಕ್ಷಣಕ್ಕೂ ಹೊಸ ಸಭಾ ಮಂಟಪಗಳು ದೃಷ್ಟಿಗೆ ಬೀಳುತ್ತಿದ್ದುವು. ಇವೆಲ್ಲವುಗಳ ಮುಂದೆ ೯ ಅಂತಸ್ತುಗಳುಳ್ಳ ಸುಂದರವಾದ ಒಂದು ದೊಡ್ಡ ಡೇರೆಯುಂಟು. ಈ ಡೇರೆಯಲ್ಲಿ ೯ನೆಯ ಉಪ್ಪರಿಗೆಯಲ್ಲಿ ರಾಯನ ರತ್ನಖಚಿತವಾದ ಬಂಗಾರದ ಸಿಂಹಾಸನವು ಕಂಗೊಳಿಸುತ್ತದೆ. ೧೦ ಗಜ (೩೦ ಚಚ್ಚೌಕ ಫೂಟು) ಉದ್ದಗಲವುಳ್ಳ ನಡುವಿನ ಸಭಾಮಂಡಪಕ್ಕೆ ನನ್ನನ್ನು ಕರೆದೊಯ್ದುರು, ಆ ಸಭಾಮಂಡಪದ ಗೋಡೆಗಳೂ, ಮೇಲ್ಬದಿಯೂ ಬೆಲೆಯುಳ್ಳ ಮುತ್ತು ರತ್ನಗಳಿಂದ ಕೆತ್ತಲ್ಪಟ್ಟ ಬಂಗಾರದ ನಕ್ಷತ್ರ