ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸುನಂದೆಗೆ ನಗುಬಂತು.ವ್ಯಧೆಯ ದ್ವನಿಯಿಂದ ರಾಧಮ್ಮ ಅಂದರು: ಯಾಕ್ನಗ್ತೀಯಾ? ಆಡಬಾರದ್ದು ಏನಾದರೂ ನಾನಂದ್ನೆ?" "ಇಲ.ನನ್ನ ಅವಸ್ಥೆ ಯೋಚಿಸ್ಕೊಂಡು ನಗುಬಂತು ನೀವು ಹೇಳಿದ್ದನ್ನ ಯಾವಾಗಲೂ ನೆನಪಿಟ್ಟಿತ್ರೀನಿ ರಾಧಮ್ನೋರೆ. .ನೀವು ನನ್ನ ಹಿರಿಯಕ್ಕ
ಆನ್ನೋದನ್ನ ಯಾವತ್ತೂ ಮರೆಯೋದಿಲ್ಲ. "ಆದೇನು ಹೇಳೋಕ್ಕೆ ಬರುತ್ತೊ ನಂಗೆ!" ಅರ್ಧ ತನಷ್ಟಕ್ಕೆ, ಅರ್ದ ಉಳಿದವರನ್ನು ಉದ್ದೇಶಿಸಿ, ಕುಸುಮಾ ಅಂದಳು: "ಮನುಷ್ಯನಲ್ಲ- ಮೃಗ,ಪಿಶಾಚಿ!" ರಾಧಮ್ಮ ನಿಟ್ಟುಸಿರು ಬಿಟರು.ಬಳಿಕ ಏಳುತ್ತ ಹೇಳಿದರು: "ಕಾಫಿಗೆ ನೀರಿಟ್ಟು ಬರ್ರ್ತೀನಿ." "ಬೇಡಿ ರಾಧಮ್ಮ , ಈಗ ಯಾಕೆ ಕಾಫಿ?" ಕುಸುಮಾ ಏನೂ ಹೇಳಲಿಲ್ಲ. ಬೇರೆ ದಿನವಾಗಿದ್ದರೆ,'ನಡೀರಿ,ಎಲ್ಲರೂ ನಮ್ಮನೆಗೇ ಹೋಗೋಣ' ಎನ್ನುತ್ತಿದ್ದಳು. ಈ ಹೊತ್ತು ಅಂತಹ ಶಿಷ್ಟಾ
ಚಾರದ ಯಾವ ವಿವೇಚನೆಯೂ ಆಕೆಯಿಂದ ಸಾಧ್ಯವಿರಲಿಲ್ಲ.
ರಾಧಮ್ಮ ಅಡುಗೆ ಮನೆಗೆ ನಡೆದೊಡನೆ ಕುಸುಮಾ ಕೇಳಿದಳು: "ಊರಿಗೆ ಇವತ್ತೇ ಹೊರಡ್ತೀರಾ?" "ಹೂಂ. ರಾತ್ರೆಯ ರೈಲಿಗೆ ಹೋಗೋಣಾಂತ ನಮ್ಮ ತಂದೆ ಅಂದ್ರು. ತಪ್ಪಿದರೆ ಬೆಳಗೆ ಹೋಗ್ತೀವಿ." ರಾಧಮ್ಮನಿಗೆ ಇವರ ಮಾತು ಕೇಳಿಸುತಿತ್ತು. ಆಕೆ ಒಳಗೆನಿಂದಲೇ ಅಂದರು:
"ಇನು ಬರೋದು ಯಾವತ್ತೋ ಏನೋ. ಎರಡು ದಿವಸ ಇದ್ಬಿಟ್ಟು
ಹೋಗಬಾರದೇ ಸುನಂದಾ?."
"ಇಲ್ರಿ ನಾನು ಹೋಗ್ಬೇಕು. ವಿಜಯ ಗಂಡನ ಮನೆಗೆ ಹೋದ
ದಿವಸದಿಂದ ನಮ್ಮಮ್ಮ ಒಂದು ಧರಾ ಇದಾಳೆ. ಒಂದು ದಿನವೂ ಆಕೆಯ ಆರೋಗ್ಯ ಸರಿಯಾಗಿರೋದಿಲ್ಲ."
"ಸುನಂದೆಯೇನೋ ಆ ಕಾರಣವನು ಕೋಟ್ಟಳು. ಆದರೆ ಮರು ಕ್ಷಣದಲ್ಲೆ