ಅರಿವಿಲ್ಲದ ಕಾರಣ ಭವಕ್ಕೆ

ವಿಕಿಸೋರ್ಸ್ದಿಂದ



Pages   (key to Page Status)   


ಅರಿವಿಲ್ಲದ ಕಾರಣ ಭವಕ್ಕೆ ಬಂದರು
ಅರಿವಿಲ್ಲದವಂಗೆ ಗುರುವಿಲ್ಲ
ಗುರುವಿಲ್ಲದವಂಗೆ ಆಚಾರವಿಲ್ಲ. ಆಚಾರವಿಲ್ಲದವಂಗೆ ಲಿಂಗವಿಲ್ಲ
ಲಿಂಗವಿಲ್ಲದವಂಗೆ ಜಂಗಮವಿಲ್ಲ. ಜಂಗಮವಿಲ್ಲದವಂಗೆ ಪ್ರಸಾದವಿಲ್ಲ
ಪ್ರಸಾದವಿಲ್ಲದವಂಗೆ ಗಣತ್ವವಿಲ್ಲ. ಅರಿವು ಸಾಹಿತ್ಯ ಗುರು
ಗುರುಸಾಹಿತ್ಯ ಆಚಾರ
ಆಚಾರಸಾಹಿತ್ಯ ಲಿಂಗ
ಲಿಂಗಸಾಹಿತ್ಯ ಜಂಗಮ
ಜಂಗಮಸಾಹಿತ್ಯ ಪ್ರಸಾದ
ಪ್ರಸಾದಸಾಹಿತ್ಯ ಗಣತ್ವ. ಇದು ಕಾರಣ
ಕೂಡಲಚೆನ್ನಸಂಗನಲ್ಲಿ ಈ ಸ್ಥಲವಾದವರಿಗೆಲ್ಲಾ ಭಕ್ತಿ ಉನ್ಮದ ಉಂಟು
[ಸಕಳ] ನಿರ್ವಾಣ ಲಿಂಗೈಕ್ಯಪದವಪೂರ್ವ.