ಅವಿಶ್ವಾಸಲೋಕದ ಕರ್ಮಿಗಳಿಗೆ, ಯಮದೂತರೆಂಬ

ವಿಕಿಸೋರ್ಸ್ದಿಂದ



Pages   (key to Page Status)   


ಅವಿಶ್ವಾಸಲೋಕದ ಕರ್ಮಿಗಳಿಗೆ
ಯಮದೂತರೆಂಬ ದಂಡಣೆಯ ಮಾಡಿದೆಯಯ್ಯಾ. ಶಿವಭಕ್ತರಿಗೆ ಶಿವದೂತರೆಂಬ ದಂಡಣೆಯ ಮಾಡಿದೆಯಯ್ಯಾ. ಇದು ಕಾರಣ
ಭಕ್ತಿಯನರಿಯೆ
ಯುಕ್ತಿಯನರಿಯೆ ಜಂಗಮವೆ ಕೂಡಲಚೆನ್ನಸಂಗಯ್ಯನೆಂಬೆ.