ಪುಟ:ಕರ್ನಾಟಕ ಗತವೈಭವ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧ನೆಯ ಪೂರಕ ಪ್ರಕರಣ - ಕರ್ನಾಟಕ-ಇತಿಹಾಸ-ಸಂಶೋಧನೆ

೧೪೫


ಹಳೆಯ ಮಾಸಪತ್ರಿಕೆಗಳ ನಾಲ್ಕನೆಯ ಸಂಪುಟದ ೧ನೇ ಪುಟದಲ್ಲಿ (Journal of the Royal Asiatic Society old Series vol. IV page 1 &c.) ಅಲ್ಲಿ ಮುದ್ರಿತವಾಗಿದೆ. ಮುಂದೆ ಅದರಲ್ಲಿ ಕೆಲವು ಸುಧಾರಣೆಗಳನ್ನು ಮಾಡಿ, ಅವರು ಅದನ್ನು ವಾಙ್ಮಯ ಮತ್ತು ಶಾಸ್ತ್ರ ಇವುಗಳ ಸಂಬಂಧಪಟ್ಟ ಮದ್ರಾಸ್ ಜರ್ನಲಿನ ೭ನೆಯ ಸಂಪುಟದ ೧೯೩ನೆಯ ಪುಟ (Madras Journal of the Literature and Science vol. VII page 193) ದಲ್ಲಿ ಪ್ರಸಿದ್ಧಗೊಳಿಸಿರುವರು.

ಅನಂತರ ಕರ್ನಲ ಮೆಕೆಂಝಿ ಸಾಹೇಬರು ದಕ್ಷಿಣ ಹಿಂದುಸ್ಥಾನದೊಳಗಿನ ಅನೇಕ ಪ್ರಾಚೀನ ಶಿಲಾಲೇಖಗಳನ್ನೂ ತಾಮ್ರ ಪಟಗಳನ್ನೂ ಮುದ್ರಣ ತೆಗೆದು ಕೊಂಡು ದೊಡ್ಡ ಸಂಗ್ರಹ ಮಾಡಿರುವರು. ಅದು ಇನ್ನೂ ಪ್ರಸಿದ್ದವಾದಂತೆ ತೋರಲಿಲ್ಲ.

ಇತ್ತ ಮೈಸೂರಲ್ಲಿ ಮೈಸೂರು ಸರಕಾರದವರು, ಮೇಜರ್ ಡಿಕ್ಸನ್ (Major Dixon) ಇವರು ತೆಗೆದುಕೊಂಡ ತಸಬೀರುಗಳನ್ನು ಮುದ್ರಿಸಿದರು. ಮೇಜರ್ ಡಿಕ್ಸನ್ (Major Dixon) ಸಾಹೇಬರು ಮೈಸೂರು ಸರಕಾರದ ಆಶ್ರಯದಿಂದ, ಚಿತ್ರಕಲ್ಲುದುರ್ಗ, ಬಳ್ಳೆಗಾಂವಿ, ಹರಿಹರ ಮುಂತಾದುವುಗಳಲ್ಲಿಯು ಸುಮಾರು ೯೦ ಲೇಖಗಳನ್ನು ೧೮೬೫ ನೆಯ ಇಸವಿಯಲ್ಲಿ ಪ್ರಸಿದ್ಧ ಪಡಿಸಿದರು.

ಡಾ. ಪಿಗು ಮತ್ತು ಕರ್ನಲ್ ಟ್ರಸ್ಟ್ ಈ ಉಭಯರು ಧಾರವಾಡ ಮತ್ತು ಮೈಸೂರ ಪ್ರಾಂತಗಳೊಳಗಿನ ಸುಮಾರು ೬೦ ಶಿಲಾಲೇಖಗಳ ತಸಬೀರು ತೆಗೆದು ಕೊಂಡಿದ್ದರು. ಅವುಗಳ ಆಧಾರದಿಂದ ವಿ||. ಹೋಪ್ ಎಂಬವರು ಸರಕಾರದವರ ಸಹಾಯದಿಂದ ಧಾರವಾಡ ಮತ್ತೂ ಮೈಸೂರುಗಳಲ್ಲಿಯ ಶಿಲಾಲೇಖಗಳು (Inscriptions in Dharwar and Mysore) ಎಂಬ ಪುಸ್ತಕದಲ್ಲಿ ೬೪ ಶಿಲಾಲಿಪಿಗಳ ತಸಬೀರುಗಳನ್ನು ಮುದ್ರಿಸಿದರು. ಆದರೆ ಇದರ ಹತ್ತೇ ಪ್ರತಿಗಳು ಮುದ್ರಿತವಾಗಿದ್ದುವು. ಅವು ಇರುವ ವಿವರ:- (೧) ರಾಯಲ್ ಏಶಿಯಾಟಿಕ್ ಲಾಯಬ್ರರಿ ಲಂಡನ್ (Royal Asiatic Society London). (೨) ಸೊಸಾಯಿಟಿ ಏಶಿಯಾಟಿಕ್ ಪಾರೀಸ್ (Society Asiatic Paris). (೩) ಆಯಲ್ ಒರಿಯಂಟಲ್ ಸೊಸಾಯಿಟಿ, ಲೀಪ್ಸಿಕ್ (Royal Oriental

10