ಆಕಾರವೇ ಭಕ್ತ ನಿರಾಕಾರವೇ

ವಿಕಿಸೋರ್ಸ್ದಿಂದ



Pages   (key to Page Status)   


ಆಕಾರವೇ ಭಕ್ತ ನಿರಾಕಾರವೇ ಮಹೇಶ್ವರ ಸಹಕಾರವೇ ಪ್ರಸಾದಿ ಸನ್ಮತ ಈಗಲೇ ಪ್ರಾಣಲಿಂಗಿ ಲೋಕವಿರಹಿತನೇ ಶರಣ ಈ ಭ್ರಾಂತುವಿನ ಬಲೆಯೊಳಗೆ ಸಿಲುಕದಾತನೇ ಐಕ್ಯ. ಅದು ಎಂತು ಎಂದರೆ : ಪೃಥ್ವಿ ಈಗಲೇ ಭಕ್ತ ಅಪ್ಪು ಈಗಲೇ ಮಹೇಶ್ವರ ಅಗ್ನಿ ಈಗಲೇ ಪ್ರಸಾದಿ ವಾಯು ಈಗಲೇ ಪ್ರಾಣಲಿಂಗಿ ಆಕಾಶ ಈಗಲೇ ಶರಣ ಈ ಪಂಚತತ್ವದ ಒಳಗೆ ಬೆಳಕು ಕತ್ತಲೆ ಐಕ್ಯವು. ಇದು ಕಾರಣ
ಕೂಡಲಚೆನ್ನಸಂಗಮದೇವಯ್ಯಾ ನಿಮ್ಮ ಶರಣ ಪಂಚತತ್ವದ ಒ?ಗೆ ಪಂಚತತ್ವ ಪಂಚತತ್ವ ಎಂಬ ಅಣ್ಣಗಳಿರಾ ನೀವು ಕೇಳಿರೊ.