ಕಟ್ಟರಸನ ಬಂದು ಕಳ್ಳರು

ವಿಕಿಸೋರ್ಸ್ದಿಂದ



Pages   (key to Page Status)   


ಕಟ್ಟರಸನ ಬಂದು ಕಳ್ಳರು ಮುತ್ತಲು
ಪಟ್ಟಣ ಬೆದರಿತ್ತು ನೋಡಾ. ಪಟ್ಟಣದ ತಳವಾರರು ದುಷ್ಟರನೆಬ್ಬಟ್ಟಲು ಬೆದರಿಕೆ ಬಿಟ್ಟೋಡಿತ್ತು ನೋಡಾ. ಕಾಯಪಟ್ಟಣದ ಕಳವಳಡಗಿತ್ತು. ಇದನೇನೆಂಬೆನಯ್ಯಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.