ಕರಣಂಗಳೆಂಬ ಕತ್ತಲೆಗವಿದು ಕಾಮುಕಾತುರದಿಂ

ವಿಕಿಸೋರ್ಸ್ದಿಂದ



Pages   (key to Page Status)   


ಕರಣಂಗಳೆಂಬ ಕತ್ತಲೆಗವಿದು ಕಾಮುಕಾತುರದಿಂ ವಿಷಯಾಂಬುಧಿಯೊಳಗೆ ಮುಳುಗಿ ಯತೀಶ್ವರನು ಯತೀಶ್ವರನು ಎಂದು ಹಿತಗೆಟ್ಟು ನುಡಿದುಕೊಂಡು ನಡೆವ ಮತಿಹೀನ ಮಾನವರನೇನೆಂಬೆ ಶಿವನೇ? ಈಶ್ವರ ಶರಣಂಗೆ ವಿಕಾರ ಹೊದ್ದಿದಡೆ ಮೀಸಲ
ನಾಯಿ ಮುಟ್ಟಿದಂತಾಯಿತ್ತು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.