ಕರಿಯ ದಾನವನ ಶಿರದಲ್ಲಿ

ವಿಕಿಸೋರ್ಸ್ದಿಂದ



Pages   (key to Page Status)   


ಕರಿಯ ದಾನವನ ಶಿರದಲ್ಲಿ ಮರುಜೆವಣಿಯ ಹಣ್ಣಿಪ್ಪುದ ಕಂಡೆ. ಇರುಹೆ ಬಂದು ಮುತ್ತಲು ಮರುಜೆವಣಿ ಆರಿಗೂ ಕಾಣಬಾರದಯ್ಯ. ಇರುಹಿನ ಬಾಯ ಟೊಣೆದು ಮರುಜೆವಣಿಯ ಹಣ್ಣ ಸವಿಯಬಲ್ಲಾತಂಗೆ ಮರಣವಿನ್ನೆಲ್ಲಿಯದೋ? ಮರಣವ ಗೆಲಿದಾತನನೇ ಮಹಾಲಿಂಗೈಕ್ಯನೆಂಬೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.