ಕಾಯದೊಳಗಣ ಆಯಾಸಂಗೊಂಡು ಮನಸ್ಸು

ವಿಕಿಸೋರ್ಸ್ದಿಂದ



Pages   (key to Page Status)   


ಕಾಯದೊಳಗಣ ಮನಸ್ಸು ಕಂಗೆಟ್ಟು ಹೊರಬಿದ್ದು ಕರಣೇಂದ್ರಿಯಂಗಳನೆ ಕೂಡಿ
ಆಯಾಸಂಗೊಂಡು ಧಾವತಿಯಿಂದೆ ಸಾಯುತಿರ್ಪುದು ನೋಡಾ ಜಗವೆಲ್ಲ. ಆ ಕಾಯದ ಕಳವಳ ಹಿಂಗಿ ಮನವು ಮಹಾಘನದಲ್ಲಿ ಅಡಗಲು
ಸಾವು ತಪ್ಪಿತ್ತು ನೋಡಾ ಅಖಂಡೇಶ್ವರಾ.