ಅನಾದಿಕರ್ಮಿಗಳಾಗಿ, ಅವಾಂತರ ಮುಕ್ತರಾದೆವೆಂದು

ವಿಕಿಸೋರ್ಸ್ದಿಂದ



Pages   (key to Page Status)   


ಅನಾದಿಕರ್ಮಿಗಳಾಗಿ
ಅವಾಂತರ ಮುಕ್ತರಾದೆವೆಂದು ಭೇದವಮಾಡಿ ನುಡಿವವರೆಲ್ಲ ಭವಬಾಧೆಯಲ್ಲಿ ಮುಳುಗಿ
ಭವಪಾಶಂಗಳು ಹರಿಯದೆಯಿಪ್ಪ ಪಶುಭಾವದ ಪರಿಯ ನೋಡ. ಇದು ಕಾರಣ
ಆದಿಯಲ್ಲಿಯ ಮುಕ್ತರು
ಅನಾದಿಯಲ್ಲಿಯು ಮುಕ್ತರು
ಎಂದೆಂದೂ ಮುಕ್ತರಯ್ಯ ನಿಮ್ಮ ಶರಣರು
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.