ಗುರುವಚನದಿಂದಲ್ಲದೆ ಗುರುವಚನದಿಂದಲ್ಲದೆ ಭವಪಾಶ

ವಿಕಿಸೋರ್ಸ್ದಿಂದ



Pages   (key to Page Status)   


ಗುರುವಚನದಿಂದಲ್ಲದೆ
ಭವಪಾಶ
ಹರಿಯದು.
ಗುರುವಚನದಿಂದಲ್ಲದೆ
ಜಾತಿಭೇದ
ಮಾಣದು.
ಗುರುವಚನದಿಂದಲ್ಲದೆ
ಸೂತಕಪಾತಕಂಗಳು
ಕೆಡದಿಹವು.
ಗುರುವಚನದಿಂದಲ್ಲದೆ
ಅಂಗ
ಮನ
ಪ್ರಾಣಂಗಳು
ಶುದ್ಧವಾಗಲರಿಯವು.
ಗುರುವಚನದಿಂದಲ್ಲದೆ
ಲಿಂಗಕ್ಕೆ
ಕಳೆವೆರಸದು.
ಗುರುವಚನದಿಂದಲ್ಲದೆ
ಸದ್ಭಕ್ತಿ
ನೆಲೆಗೊಳ್ಳದು.
ಗುರುವಚನದಿಂದಲ್ಲದೆ
ನಿಜಮುಕ್ತಿ
ಕಾಣಬಾರದು.
ಇದು
ಕಾರಣ
ಗುರುಮುಟ್ಟಿ
ಗುರುವಾದ
ಪರಮಶರಣರ
ಶ್ರೀ
ಚರಣಕ್ಕೆ
ಶರಣು
ಶರಣೆಂಬೆನಯ್ಯ
ಅಖಂಡೇಶ್ವರಾ.