ಗುರುಹರ ಬಿಡದಿರಬೇಕು. ವಚನ

ವಿಕಿಸೋರ್ಸ್ದಿಂದ



Pages   (key to Page Status)   


ಗುರುಹರ
ವಚನ
ಪ್ರಮಾಣದಿಂದೆ
ಹಿಡಿದ
ವ್ರತಶೀಲನೇಮಂಗಳ
ಕಡೆತನಕ
ಬಿಡದಿರಬೇಕು.
ಜಾತಿ
ವರ್ಣ
ಆಶ್ರಮ
ಕುಲ
ಗೋತ್ರಂಗಳೆಂಬ
ತನ್ನ
ಪೂರ್ವಾಶ್ರಮ
ಪದ್ಧತಿಯ
ಮರೆಯಬೇಕು.
ಇಂದಿಗೆ
ಬೇಕು
ನಾಳಿಗೆ
ಬೇಕೆಂಬ
ಆಸೆಯಾಮಿಷವ
ಜರೆಯಬೇಕು.
ಆಣವಮಲ
ಮಾಯಾಮಲ
ಕಾರ್ಮಿಕಮಲವೆಂಬ
ಮಲತ್ರಯಂಗಳ
ಬಲೆಯ
ಹರಿಯಬೇಕು.
ಅರುಹು
ಆಚಾರ
ಸತ್‍ಕ್ರಿಯಾಸಂಪನ್ನನಾಗಿರಬೇಕು.
ಇಂತೀ
ವರ್ಮವನರಿಯದೆ
ಬರಿದೆ
ದೇವಭಕ್ತರೆನಿಸಿಕೊಂಬ
ಭವಪಾತಕರ
ಎನಗೊಮ್ಮೆ
ತೋರದಿರಯ್ಯ
ಅಖಂಡೇಶ್ವರಾ.