ತನುವುಳ್ಳನ್ನಕ್ಕರ ನಿನ್ನ ಸಾವಯನೆಂದೆ

ವಿಕಿಸೋರ್ಸ್ದಿಂದ



Pages   (key to Page Status)   


ತನುವುಳ್ಳನ್ನಕ್ಕರ ನಿನ್ನ ಸಾವಯನೆಂದೆ ಮನಪ್ರಾಣಂಗಳುಳ್ಳನ್ನಕ್ಕರ ನಿನ್ನ ಸಾವಯ ನಿರವಯನೆಂದೆ. ಅನುಭಾವವುಳ್ಳನ್ನಕ್ಕರ ನಿನ್ನ ನಿರವಯನೆಂದೆ. ನಾನುಳ್ಳನ್ನಕ್ಕರ ನೀನೆಂದೆ. ನಾ ಸತ್ತ ಬಳಿಕ ನೀನೆಲ್ಲಿಯವನು ಹೇಳ. ಇದು ಕಾರಣ
ಸಾವಯನೆನ್ನೆ
ಸಾವಯ ನಿರವಯನೆನ್ನೆ
ನಿರವಯನೆನ್ನೆ. ನಿರಾಕಾರ ಬಯಲಾದ ಕಾರಣ
ಪರಾಪರ ವಸ್ತುವೆಂದೆನಲಿಲ್ಲ ಕಾಣಾ ಎರಡಿಲ್ಲದ ನಿರಾಳನ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.