ಪರತರಶಿವಲಿಂಗವೆ ಗುರುಲಿಂಗಜಂಗಮವಾಗಿ ಧರೆಯ

ವಿಕಿಸೋರ್ಸ್ದಿಂದ



Pages   (key to Page Status)   


ಪರತರಶಿವಲಿಂಗವೆ ಗುರುಲಿಂಗಜಂಗಮವಾಗಿ ಧರೆಯ ನರರನುದ್ಧರಿಸುತಿಪ್ಪುದು ಕಾಣಿರೊ
ಅದೆಂತೆಂದಡೆ:ಅಜ್ಞಾನವೆಂಬ ಕತ್ತಲೆಯ ಕಳೆವಡೆ ಗುರುಲಿಂಗ ಕಾರಣವಾಗಿಪ್ಪುದು ಕಾಣಿರೊ. ಒಳಹೊರಗಿನ ನೋಟಮಾಟದ ತಿಳಿವಿನ ಬಳಗಕ್ಕೆಲ್ಲ ಶಿವಲಿಂಗವೆ ಕಾರಣವಾಗಿಪ್ಪುದು ಕಾಣಿರೋ. `ಜ್ಯೋತಿಷ್ಮದ್ಭಾಜಮಾನಂ ಮಹಸ್ವತ್' ಎಂದು ಕೂಡಲಚೆನ್ನಸಂಗಮದೇವನ ವಚನವಿಪ್ಪುದಾಗಿ ಗುರುಲಿಂಗಜಂಗಮದ ಪಾದೋದಕವೆಂಬಮೃತವ ಸೇವಿಸಿ ನಮ್ಮ ಶರಣರು ಜರಾಮರಣರಹಿತರೆನಿಸಿ ನಿತ್ಯಮುಕ್ತರಾದರು.