ಶಿವನ ಪಾದೋದಕವನಲ್ಲದೆ ಕೊಳ್ಳಲಾಗದೆಂದುದು

ವಿಕಿಸೋರ್ಸ್ದಿಂದ



Pages   (key to Page Status)   


ಶಿವನ ಪಾದೋದಕವನಲ್ಲದೆ ಕೊಳ್ಳಲಾಗದೆಂದುದು ವೇದ. ಶಿವನ ಪ್ರಸಾದವನಲ್ಲದೆ ಉಣಲಾಗದೆಂದುದು ವೇದ. ಜಾಬಾಲಶಿಖಾಯಾಂ: ``ರುದ್ರೇಣಾತ್ತಮಶ್ನಂತಿ ರುದ್ರೇಣ ಪೀತಂ ಪಿಬಂತಿ ರುದ್ರೇಣ ಘ್ರಾತಂ ಜಿಘ್ರಂತಿ ತಸ್ಮಾತ್ ಬ್ರಾಹ್ಮಣೋ ವಿದ್ವಾನ್ ನಿರ್ಮಾಲ್ಯಮೇವ ಭಕ್ಷಯೇತ್ ನಿರ್ಮಾಲ್ಯಮೇವ ನಿಷೇವಯೇತ್ ' ಇದನರಿದು
ಶಿವನ ಪಾದೋದಕ ಪ್ರಸಾದವ ಕೊಂಬಾತನೆ ಸದ್ಬ್ರಾಹ್ಮಣ
ಆತನೆ ವಿದ್ವಾಂಸನು
ಆತನೆ ಎಲ್ಲವನು ಬಲ್ಲ ಸರ್ವಜ್ಞನಯ್ಯಾ
ಆತನೆ ಸದ್ಭಕ್ತನು ಕೂಡಲಚೆನ್ನಸಂಗಮದೇವಾ.