ಸಚರಾಚರದೊಳಗಿಪ್ಪ ಲಾಂಛನಧಾರಿಗಳೆಯ್ದೆ ಸಯದಾನವೆ

ವಿಕಿಸೋರ್ಸ್ದಿಂದ



Pages   (key to Page Status)   


ಸಚರಾಚರದೊಳಗಿಪ್ಪ ಲಾಂಛನಧಾರಿಗಳೆಯ್ದೆ ಸಯದಾನವೆ ಪ್ರಸಾದವೆಂದು ಹೆಸರಿಟ್ಟುಕೊಂಡುಂಬರು
ಲೋಕ ಏವೋಚ್ಯತೇ ಲಿಂಗಂ ಲಿಂಗಮೇವೋಚ್ಯತೇ ಶಿವಃ ತಲ್ಲಿಂಗಧಾರಣಾಚ್ಛಿಷ್ಯಃ ಪೂರ್ವಜನ್ಮವಿವರ್ಜಿತಃ ಇಂತು ಪಕೃತ್ಯಾದಿಗಳ ಗುಣಂಗಳು ಪಲ್ಲಟವಾದ ಕಾರಣ. ಕೂಡಲಚೆನ್ನಸಂಗನಲ್ಲಿ ಬಸವನೆಂಬ ಪ್ರಸಾದಿಗೆ ನಾನೆಂಬ ಓಗರ.