ಅಸುರನೈಶ್ವರ್ಯವನೆಣಿಸುವಡೆ

ವಿಕಿಸೋರ್ಸ್ದಿಂದ


Pages   (key to Page Status)   

ಅಸುರನೈಶ್ವರ್ಯವನೆಣಿಸುವಡೆ

ಸೀತೆಗೆ ಸರಿಮಿಗಿಲೆನಿಸುವ ಸತಿಯರೆಂಟು ಕೋಟಿ 
ಮತಿವಂತ ಶಿರಃಪ್ರಧಾನರೆಂಟು ಕೋಟಿ
ಲೆಕ್ಕವಿಲ್ಲದ ದಳವು
ಲಕ್ಷ ಕುಮಾರರು
ದಿಕ್ಪಾಲಕರವನ ಮನೆಯ ಬಂಧನದಲ್ಲಿಪ್ಪರು
ಸುರಪತಿಯರೆಲ್ಲರನಾತ ಸೆರೆಮಾಡಿ ಆಳಿದ. ಶಿವನೆ
ನೀನು ಕರುಣಿಸಿದಂತಿರದೆ
ಪರವಧುವಿನ ಬೇಟವನನ ಪ್ರಾಣ ಕೊಂಡಿತ್ತು. ಇದನರಿದು ಪರವಧುಗಳಿಗೆಳಸುವರ ಕಂಡು ಗರುಡನ ಕಂಡ ಸರ್ಪ ಧರೆಗಿಳಿವಂತೆ ಅಡಗಿಪ್ಪೆನಯ್ಯಾ ಕೂಡಲಸಂಗಮದೇವಾ.