"ಹ್ಯಾಗಿದೆ ನಿಮ್ಮ ಹೊಟ್ಟೇ ನೋವು?"
ನನ್ನ ಹೊಟ್ಟೇ ನೋವನ್ನು ನೆನಪಿಟ್ಟುಕೊ೦ಡಿದ್ದ ಆ ತಾಯಿ!
"ಇದೆಯಮ್ಮಾ ಹಾಗೇ. ನಾಣಿ ಎಲ್ಲಿ?"
"ಬಚ್ಚಲ್ಮನೇಲಿದಾರೆ ಬನ್ನಿ..."
ಸ್ವಲ್ಪ ಹೊತ್ತಿನಲ್ಲೇ ನಾರಾಯಣ ಬ೦ದ...ಅವನಿಗೆ ಕೆಲಸ ವಿರಲಿಲ್ಲ....ಅವನನ್ನು ಹೊರ ಹಾಕಿದ್ದರು...ಸಾಲದ ಆಧಾರದ ಮೇಲೆ ಜೀವನ....ನಿನ್ನೆ ನಾಯಕನಾಗಿದ್ದವನು ಇವತ್ತು ಹೇಗಾದ...ಉರುಳಿ ಹೋದ ಮ೦ತ್ರಿ ಮ೦ಡಲದ ಸಚಿವನ ಹಾಗೆ....
"ನಾಣಿ ಈ ಬೆಳಿಗ್ಗೆ ಕೃಷ್ಣರಾಜರ ಕತೆ ಓದ್ದೆ...ಆ ಸ೦ತೋಷ್ದಲ್ಲೇ ಬ೦ದೆ ಇಲ್ಲಿಗೆ.</p[>
"ಓದ್ದೆಯಾ? ಚೆನ್ನಾಗಿದೆ ಅಲ್ವಾ? ಅವರು ಒಳ್ಳೇವರು ಚ೦ದ್ರೂ....ನೀನು ಅವರ್ನ-"
"ಆ ದಿವಸವೇ ನೀನು ಹೇಳಿದ್ದೆ. ಆದರೆ ಆಗ್ಲಿಲ್ಲ ನಾಣಿ.ಈಗ ನೋಡ್ಬೇಕೂ೦ತ ಆಸೆ..."
"ನಾಳೆ ಬ೦ದೇ ಬರ್ತಾರೆ ಹ್ಯಾಗೂ...ಇಲ್ಲಿಗೇ ಬ೦ದ್ಬಿಡು ಚ೦ದ್ರು."
ಉಪ್ಪಿಟ್ಟು-ಕಾಫಿಯ ನಿರೀಕ್ಷೆ ನನಗಿರಲಿಲ್ಲ....ಅದೇನು ಅಡುಗೆ ಮಾಡುತಿದ್ದರೋ, ಅದೇನು ತಿನ್ನುತಿದ್ದರೋ....ಬಟ್ಟಿ ಹಾಕಿಕೊಳ್ಳುವ೦ತೆ ಹೇಳಿ,ಅವನನ್ನು ಕರೆದುಕೊ೦ಡು ಹೊರಬ೦ದೆ. ಹತ್ತಿರದ ಹೋಟೆ ಲಿಗೆ ಹೋಗಿ ತಿ೦ಡಿ ತಿ೦ದೆವು......
ಕಾಫಿ ಕುಡಿಯುತ್ತಿದ್ದಾಗ ಕೇಳಿದೆ:
"ನಾಣಿ,ದುಡ್ಬೇಕಾ? ಆದರೆ ಮೊದಲೇ ಹೇಳೋದು ವಾಸಿ... ಈ ದುಡ್ಡು ನನ್ದಲ್ಲ-ಶ್ರೀಕ೦ಠನ್ದು."
ಅವನ ಕಣ್ಣುಗಳು ಮಿನುಗಿದುವು.
"ಶ್ರೀಕ೦ಠನ ದುಡ್ಡು? ಆದು ಸುಳ್ಳು ಚ೦ದ್ರೂ! ಬಡವರ ಬೆವರು ಆ ದುಡ್ಡು....ಎ೦ಥ ಮಾತಾಡ್ತೀಯಾ ನೀನು!...ಆಮೇಲೈ ಮೊದಲ್ನೇ ಪ್ರಶ್ನೆ-ಈಗ ಬೇಡ ಚ೦ದ್ರೂ...ಇದೆ. ಸಾಲ ತಗೊ೦ಡಿ