"ಸೇದಿ ಸೇದಿ ಅವಶ್ಯವಾಗಿ ಸೇದಿ"
ಬೂದಿ ಕರಂಡಕವನ್ನು ನಾನು ಅವನ ಬಳಿಗೆ ತಳ್ಳಿದೆ
"ಹಾಗಿದ್ದರೆ ಒಂದು ಸಿಗರೇಟು ಕೊಡಿ"
ಅದೀಗ ಸೊಗಸುಗಾರಿಗೆ!ಆತ ನನ್ನ ಬೆಳ್ಳಿಯ ಕೇಸಿನಿಂದೊಂದು
ಗೊಲ್ದ್ ಫ್ಲೇಕನ್ನೆತ್ತಿಕೊಂಡ. ನಾನೀ ಕಡ್ಡಿಗೀರಿ ಅವನಿಂದ "ಥ್ಯಾಂಕ್ ಯೂ" ಅನ್ನಿಸಿಕೂಂಡೆ. ಸುಟ್ಟುಬೂದಿ ಟ್ರೀಯ ಸುತ್ತಲೂ ಬೀಳುವಂತೆ ಆತ ಸಿಗರೇಟು ಕೊಡವುತಿದ್ದ! ನಾನು ಬಲು ಕುತೂ ಹಲದಿಂದ ಆತನ ಮಾತುಗಳನ್ನು ಕೇಳಲು ಸಿದ್ಧನಾದೆ.
ಆದರೆ ಶ್ರೀಕಂಠ ಕೂಠಡಿಯಿಂದ ಹೊರಬಂದು ನನ್ನರಸ ನಿಮಿಷ
ಗಳಿಗೆ ಭಂಗತಂದ.
ಆ ಚೀಫ್ ಆಸೋಸಿಯೇಟ್ ಎಡಿಟರ್ ಚೆಲುವಯ್ಯ ಎದ್ದು
ನಿಂತು ಬಾಗಿ ವಂದಿಸಿದ.
"ಹಾಗಾದರೆ ಒಪ್ಪಿಗೆಯೋ?"
ಅದು ಶೀಕಂಠನ ಪ್ರಶ್ನೆ. ಅವನ ರೀತಿಯೇ ಹಾಗೆ. ಇತರ
ರೊಡನೆ ಮಿತವಾದ ಮಾತು-ಎಷ್ತು ಬೇಕೋ ಅಷ್ಟು. ಇಲ್ಲಿಯೂ ಅಷ್ಟೆ....ಫ್ಹೊನೆನಲ್ಲಿ ಮೂದಲೀ ಮಾತುಕತೆಯಾಗಿರಬೇಕು. ಆದಾದ ಮೀಲೆ ಒಪ್ಪಿಗೆಯ ಮಾತು ಮಾತ್ರ.
"ಆದರೆ ಐದು ರೂಪಾಯಿ ಸಾಲದು ಸಾರ್."
"ಸಾಕು. ದಿನಕ್ಕೊಂದು ಕರಪತ್ರ. ಹತ್ತು ದಿವಸಗಳಿಗೆ, ಹತ್ತು
ಕರಪತ್ರಗಳಿಗೆ, ಐವತ್ತು ರೂಪಯಿ ಪ್ರಿಂಟಿಗೂ ನಿಮ್ಮ ಪ್ರೆಸ್ನಲ್ಲೆ ಮಾಡಿಸಿ. ಆದರ ದುಡ್ಡು ಬೇರೆ........"
ಚೆಲುವಯ್ಯ ಒಂದು ಕೈಯಿಂದ ಇನ್ನಂದನ್ನು ತೀಡುತ್ತ ನಿಂತ
ಶ್ರೀಕಂಠ ಐದು ರೂಪಾಯಿಯ ನೋಟವನ್ನು ಕೊಟ್ಟುದಾಯಿತು.
"ಸಾಯಂಕಾಲ ಬನ್ನಿ. ಪಾಯಿಂಟ್ಸ್ ಹೇಳ್ತೀನಿ. ಬರಕೂಂಡು.
ಹೋಗಿ."
"ಆಗಲಿ ಸಾರ್. ಹ್ಯಾಂಡ್ ಬಿಲ್ ಯಾರ ಹೆಸರಲ್ಲಿ ಸಾರ್
ಇರ್ಬೇಕು?"