ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ವ

ವಿಕಿಸೋರ್ಸ್ದಿಂದ

ಅವರ್ಗೀಯ ವ್ಯಂಜನವರ್ಗದ ನಾಲ್ಕನೆಯ ಅಕ್ಷರ. ದಂತೋಷ್ಠ್ಯ ಘೋಷ ಸಂಘರ್ಷ ವ್ಯಂಜನ ಧ್ವನಿ. ಅಶೋಕನ ಕಾಲದ ಬ್ರಾಹ್ಮೀಲಿಪಿಯಲ್ಲಿ ಗುಂಡಾದ ಮತ್ತು ವೃತ್ತಾಕಾರದ ಅಕ್ಷರಗಳು ಬಹು ಕಡಮೆ. ಆದರೆ ವ ಎಂಬ ಅಕ್ಷರ ವೃತ್ತದ ಮೇಲೆ ಒಂದು ಸರಳರೇಖೆಯನ್ನುಳ್ಳದ್ದಾಗಿದೆ. ಸಾತವಾಹನ ಕಾಲದಲ್ಲಿ ಈ ವೃತ್ತ ತ್ರಿಕೋಣಾಕೃತಿಯಾಗಿ ಪರಿವರ್ತಿತವಾಗಿದೆ. ಕದಂಬ ಕಾಲದಲ್ಲಿ ಈ ತ್ರಿಕೋಣ ಅಗಲವಾಗಿ ಸರಳ ರೇಖೆಯ ಒಂದು ಭಾಗದಲ್ಲಿ ಮಾತ್ರ ಬರೆಯಲ್ಪಡುತ್ತದೆ. ರಾಷ್ಟ್ರಕೂಟ ಕಾಲ ದಲ್ಲಿ ಕೆಳಭಾಗದ ಕೊಂಡಿ ಪಕ್ಕದ ರೇಖೆಗೆ ಇನ್ನೂ ಸೇರಿಕೊಂಡಿರುವು ದನ್ನು ಗಮನಿಸ ಬಹುದು. ಇದು ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಬದಲಾ ವಣೆಯನ್ನು ಹೊಂದುತ್ತದೆ. ಆಗ ಪಕ್ಕದ ರೇಖೆ ಕೆಳಭಾಗದ ಕೊಂಡಿಯೊಂದಿಗೆ ಸೇರಿರದೆ ಇರುವುದು ಗಮನಾರ್ಹ. ಕಳಚುರಿ ಹೊಯ್ಸಳ ಮತ್ತು ಸೇವುಣರ ಕಾಲದಲ್ಲಿ ಈ ಕೊಂಡಿ ಇನ್ನೂ ಸಣ್ಣದಾಗಿ ಪಕ್ಕದ ರೇಖೆಯಿಂದ ದೂರ ಸರಿಯುತ್ತದೆ. ಇದೇ ರೂಪವೇ ವಿಜಯನಗರ ಮತ್ತು ಮೈಸೂರು ಅರಸ ಕಾಲದಲ್ಲಿಯೂ ಮುಂದುವರಿಯುತ್ತದೆ.

   			(ಎ.ವಿ.ಎನ್.)