ವಿಷಯಕ್ಕೆ ಹೋಗು

ಪುಟ:ಮಹಿರಾವಣನ ಕಾಳಗ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ಕಾವ್ಯಕಲಾನಿಧಿ ಅಗ್ರಗಣ್ಯ ಗವಾಕ್ಷ ಗವಯ ಸ | ಮಗ್ರದೆಪ್ಪತ್ತೇಳುಕೋಟಿಯ | ನಿಗ್ರಹದ ಕಪಿನಾಯಕರ ಪಾಳೆಯವನೀಕ್ಷಿಸಿದ ||೨೮|| ಸುರಗಿರಿಗಳೊ ಕಪಿಗಳೋ ಹಿಮ || ಗಿರಿಗಳೊ ಮುಗಳೋ ವಿನೀಲದ | ಗಿರಿಗಳೊ ಕರಡಿಗಳೊ ನಿಷಧಿ ಸಿಂಗಳೀಕಗಳೋ || ಧುರದೊಳಿವರನು ಜಯಿಸುವೊಡೆ ಶಂ | ಕರಗೆ ತೀರದು ಮಿಕ್ಕ ದಾನವ | ಸುರನರೋರಗರಿರವೆ ಮಝ ಭಾಸೆಂದು ಬೆ”ಗದ ||೨೯|| ಕರಡಿಗಳ ಕರಿಘಟೆಯ ಮುಸುಗಳ | ತುರಗಗಳನುರುಂದನಂಗಳ | ಹಿರಿಯ ದೇಹದ ಸಿಂಗಳೀಕದ ನೆರೆದ ಕಾಲಾಳ || ಪರಿವಿಡಿಯ ವಲಿಮುಖರ ನೋಡುತ | ನರಪ ರಾಮನ ಚಾತುರಂಗವ | ಹಿರಿದು ಹೊಗಳುತ ಮುಂದೆ ಕಂಡನು ರಾಜಮಂದಿರವ ೩೦|| ಹೊಳೆವ ಕನಕದ ಕೋಟೆ ಬಾಗಿಲ | ಹಲವು ನೆಲೆವಾಡಗಳ ಮುಂದೆ ಜ | ವಳಿಗವಾಟದ ಬೀಯಗದ ಬಲುಲಾಳವಿಂಡಿಗೆಯ || ಹುಲಿಮುಖದ ಹರಿಯುಗವ ಸುತ್ತಲು | ನಿಲಿಸಿ ಬಾಂಧವ ತಾಳಿಗಳ ಕಂ | ಗೊಳಿಪ ರಾಜಲಯದ ಬಿ ಯ ನೋಡಿ ಬೆ”ಗಾದ ||೧|| ದನುಜನಾಸಮ್ಮೋಹನಾಸ್ತ್ರದ | ಘನದ ಮಾಯಾಪಾಶದಿಂದವೆ || ವನಚರರ ಸೇನೆಯಲಿ ಬೀಸಿದನೇನ ಹೇಳುವೆನು || ವನಜಲೋಚನ ರಾಮಲಕ್ಷ್ಮಣ || ರಿನತನಯ ಮುಂತಾದ ಕಪಿಗಳು | ಕನಸುಗಳ ಕಾಣುತ್ತ ನಿದ್ರಾವಸ್ಥೆಗೆಯ್ಲಿದರು ||೩೨||