ಪುಟ:ಭವತೀ ಕಾತ್ಯಾಯನೀ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

-೧೫-

ಪುಷ್ಪಗಂಧಕ್ಕೆ ಮೋಹಿತವಾಗಿ ಸಕಲಪುಷ್ಪಗಳಲ್ಲಿ ಸಂಚರಿಸುತ್ತ ಚಂಪಕ(ಸಂಪಗಿ) ಪುಷ್ಪ ದಲ್ಲಿ ಕೂಡುತ್ತದೆ. ಆಮೇಲೆ ಎದ್ದು ಹಾರಿಹೋಗುವದಕ್ಕೆ ಬಾರದಂತಾಗಿ ಅಲ್ಲಿಯೇ ಸತ್ತುಹೋಗುತ್ತದೆ. ಇನ್ನು ಮೀನವು ಬಲೆಗಾರನ ಉಕ್ಕಿನಗಾಣದ ತುದಿಯ ಗೋದೀ ಹಿಟ್ಟನರಸಕ್ಕೆ ಮೆಚ್ಚಿಕೊಂಡು ಹಿಡಿಯಲು, ಪರಗೀ ಮುಳ್ಳಿನಂತೆ ವಕ್ರವಾಗಿರುವ ಆ ಗಾಣವು ಗಂಟಲಿನಲ್ಲಿ ಸಿಕ್ಕಕೂಡಲೆ ಸತ್ತುಹೋಗುತ್ತದೆ.ಹೀಗೆ ಹೀಗೆ ಇವೆಲ್ಲ ಪ್ರಾಣಿಗಳು ಒಂದೊಂದೇ ಇಂದ್ರಿಯಗಳಿಂದ ಒಂದೊಂದೇ ವಿಷಯಗಳನ್ನನುಭವಿಸಿ ಸತ್ತುಹೋಗು ತ್ತವೆ. ಇದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಇರುವದು. ಹೀಗಿರಲು, ಹೆಜ್ಜೆಹೆಜ್ಜೆಗೆ ತಪ್ಪುಮಾಡುತ್ತಿರುವ ಮನುಷ್ಯನು ತಾನೊಬ್ಬನೇ ಯಾವಾಗಲೂ ಐದೂ ಇಂದ್ರಿಯಗಳಿಂದ ವಿ ಷ ಯ ಗ ಳ ನ್ನು ಒಂದೇಕಾಲಕ್ಕೆ ಸೇವಿಸಿದಮೇಲೆ ಇವನ ಹಾನಿಯಾಗದೆ ಹೇಗೆ ಉಳಿಯುವದು? ಇದರ ಮೇಲಿಂನ ಇಂದ್ರಿಯಗಳ ಸಾಮರ್ಥ್ಯದ ಜ್ಞಾನವಾಗುತ್ತದೆ.

----------------------

೪ ನೆಯ ಪ್ರಕರಣ---ಮನಸ್ಸಿನ ಶುದ್ದೀಕರಣ

ಹೀಗೆ ಇಂದ್ರಿಯಗಳು ಎಷ್ಟೇ ಬಲಿಷ್ಠವಾಗಿರಲಿ, ವಿಷಯಗಳು ಎಷ್ಟೇ ಆಕರ್ಷಕ ವಾಗಿರಲಿ, ಮನಸ್ಸನ್ನಷ್ಟು ನಾವು ತಿದ್ದಿ ಹಾದಿಗೆ ತಂದು ಬಿಟ್ಟರೆ ಅವುಗಳ ಬಾಧೆಯು ಇಲ್ಲದಂತಾಗುವದು. ಆದರೆ ಈಗಿನ ಕಾಲದ ನಾವು ಕೆಲಸಕ್ಕೆ ಬಾರದ ಕಾಡುಕಲ್ಲಿನಂತಿ ರುವ ನಮ್ಮ ಮನಸ್ಸನ್ನು ತಿದ್ದಿ ಹಾದಿಗೆ ತರುವ ಕ್ರಮವು ಹೇಗೆ? ಅದನ್ನು ತಿದ್ದುವದಕ್ಕೆ ಉಪಾಯಗಳು ಯಾವವು? ಮತ್ತು ಆ ಉಪಾಯಗಳು ಸುಲಭಸಾಧ್ಯಗಳೊ, ಕಠಿಣ ಸಾಧ್ಯಗಳೊ, ಅಸಾಧ್ಯಗಳೊ? ಕದಾಚಿತ್ ಅವು ಅಸಾಧ್ಯವಾಗಿದ್ದರೆ, ಅವನ್ನು ಹೇಳಿ ಪ್ರಯೋಜನವೇನು ? ಕೇಳಿ ಫಲವೇನು? ಯಾವ ಉಪಾಯಗಳು ಸುಲಭಸಾಧ್ಯವಾಗಿ ಯೂ, ಅನುಭವಕ್ಕೆ ಬರುವವಾಗಿಯೂ, ಇರುವವೋ, ಅಂಥ ಉಪಾಯಗಳನ್ನು ಮಾತ್ರ ಹೇಳುವದೂ, ಕೇಳುವದೂ ಶ್ರೇಯಸ್ಕರವಾಗಿರುವದು. ಆದ್ದರಿಂದ ಅಂಥ ಉಪಾಯ ಗಳನ್ನೇ ಇಲ್ಲಿ ನಾವು ಹೇಳುವದಕ್ಕೆ ಯತ್ನಿಸುತ್ತೇವೆ. ಮನಸ್ಸನ್ನು ಶುದ್ಧ ಮಾಡಿಕೊಳ್ಳುವ ದಕ್ಕಿಂತ ಮೊದಲು, ಮನಸ್ಸಿನ ಉತ್ಪತ್ತಿಯನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ. ಅದರ ಉತ್ಪತ್ತಿಯು ಯಾವ ಪದಾರ್ಥಗಳಿಂದಾಗುತ್ತದೆಂಬುವದು ತಿಳಿದರೆ, ಆಯಾ ಪದಾರ್ಥ ಗಳ ಸಾಧಕ-ಬಾಧಕತನದ ಮೇಲಿಂದ ಮನಸ್ಸನ್ನು ತಿದ್ದಿಕೊಳ್ಳುವದು ಜಡವಾಗುವದಿಲ್ಲ. ಆದ್ದರಿಂದ ಮನಸ್ಸಿನ ಉತ್ಪತ್ತಿಯು ಯಾತರಿಂದಾಗುತ್ತದೆಂಬದನ್ನು ಮೊದಲು ನಿರ್ಣಯಿಸಿ, ಅನಂತರದಲ್ಲಿ ಮನಸ್ಸಿನ ಶುದ್ದಿಯ ಪ್ರಕಾರವನ್ನು ಹೇಳುವದಕ್ಕೆ ಉಪಕ್ರಮಿಸುತ್ತೇವೆ.

ಮನುಸ್ಸು ಅಣುಮಾತ್ರವಿರುತ್ತದೆಂದು ಶಾಸ್ತ್ರಕಾರರು ಶಾಸ್ತ್ರದಲ್ಲಿ ಹೇಳಿರುತ್ತಾರೆ. ಇದರ ಮೇಲಿಂದ ವಿಚಾರಿಸಿದರೆ, ಅಣುಪ್ರಮಾಣವಾಗಿರುವ ಮನಸ್ಸು ಯಾವ ಕೆಲಸಗ ಳನ್ನು ಮಾಡುವದಕ್ಕೆ ಸಮರ್ಥವಾದೀತು? ಅಶಕ್ತನಾದ ಮನುಷ್ಯನು ಪುಷ್ಟನ ಹಾಗೆ ಕೆಲಸವನ್ನು ಮಾಡಲಾರನೆಂಬುವದು ಸ್ಪಷ್ಟವಿರುತ್ತದೆ. ಆದ್ದರಿಂದ ಅಣುಮಾತ್ರವಾಗಿದ್ದ