ಅಂಗಲಿಂಗ ಸಂಬಂಧವನುಳ್ಳ ನಿಜವೀರಶೈವ

ವಿಕಿಸೋರ್ಸ್ದಿಂದ



Pages   (key to Page Status)   


ಅಂಗಲಿಂಗ
ಸಂಬಂಧವನುಳ್ಳ
ನಿಜವೀರಶೈವ
ದೀಕ್ಷೆಯನು
ಗುರು
ತನ್ನ
ಶಿಷ್ಯಂಗೆ
ಉಪದೇಶಿಸಿ
ಮತ್ತೆ

ಲಿಂಗದಲ್ಲಿ
ಮಾಡುವ
ಜಪ
ಧ್ಯಾನ
ಅರ್ಚನೆ
ಉಪಚರಿಯ
ಅರ್ಪಿತ
ಪ್ರಸಾದಭೋಗವಾದಿಯಾದ
ವೀರಶೈವರ
ಸಾವಧಾನ
ಸತ್ಕಿೃಯಾಚಾರಂಗಳ
ಹೊಲಬನರಿಯದೆ
ಭವಿಶೈವ
ಭಿನ್ನಕರ್ಮಿಗಳಂತೆ
ಆಂಗನ್ಯಾಸ
ಕರನ್ಯಾಸ
ಪಂಚಮಶುದ್ಧಿ
ಪಂಚಾಮೃತಾಭಿಷೇಕ
ಶ್ರೀರುದ್ರ
ಪಂಚಬ್ರಹ್ಮಸ್ಥಲಾದಿ
ಶೈವಪಂಚಪಂಚಾಕ್ಷರ
ಭೂತಾದಿ
ದೇವತಾದಿ
ಗಣಿಕಾಜನನಿಕರ
ಗಣನಾಕೃತ
ಪರಿಪೂರಿತ
ಅಕ್ಷಮಣಿ
ಭವಮಾಲಿಕಾ
ಜಪೋಪಚರಿಯಂಗಳಾದಿಯಾದ
ಶೈವ
ಪಾಷಂಡಕೃತ
ಕರ್ಮಮಯವಪ್ಪ
ಭವಿಮಾಟಕೂಟಂಗ?ನುಪದೇಶಿಸಿ
ಭವಹರನಪ್ಪ
ಘನವೀರಶೈವಲಿಂಗದಲ್ಲಿ
ಮಾಡಿ
ಕೂಡಿ
ನಡೆಸಿಹನೆಂಬ
ಕಡುಸ್ವಾಮಿದ್ರೋಹಿಗೆ

ನಿಜದೀಕ್ಷೆಗೆಟ್ಟು
ಗುರುಶಿಷ್ಯರಿರ್ವರು
ನರಕಭಾಜನರಪ್ಪುದು
ತಪ್ಪುದು
ಅದೆಂತೆಂದೊಡೆ
``ನಾಮಧಾರಕಶಿಷ್ಯಾನಾಂ
ನಾಮಧಾರೀ
ಗುರುಸ್ತಥಾ
ಅಂಧಕೋ[s]ಂಧಕರಾಬದ್ಧೋ
ದ್ವಿವಿಧಂ
ಪಾತಕಂ
ಭವೇತ್'
ಎಂದುದಾಗಿ
ಇದು
ಕಾರಣ
ಗುರುಚರಪರಕರ್ತೃವಹ
ಅರುಹು
ಆಚಾರ
ಶರಣಸದ್ಭಾವಸಂಪದವನುಳ್ಳು
ಘನಗುರುರೂಪರಪ್ಪ
ಪರಮಾರಾಧ್ಯರಲ್ಲಿ
ಶರಣುವೊಕ್ಕು
ಅಜಡಮತಿಗಳಪ್ಪ
ಗುರುಶಿಷ್ಯರಿಬ್ಬರು
ತಮ್ಮ
ಹೊದ್ದಿದ
ಅಬದ್ಧವಪ್ಪ
ಭವಿಮಾಟಕೂಟಂಗಳ
ಪರಿಹರಿಸಿಕೊಂಡು
ನಿಜವಿಡಿದು
ನಡೆದು
ಕೃತಾರ್ಥರಾಗಲರಿಯದೆ
ಅಜ್ಞಾನದಿಂದಲಹಂಕರಿಸಿ
ಗುರುವಿಡಿದು
ಬಂದುದ
ಬಿಡಬಾರದೆಂದು
ಕಡುಮೂರ್ಖತನದಿಂ
ಗುರುವಚನವನುಲ್ಲಂಘಿಸಿ
ಶರಣ
ಸತ್ಕ್ರಿಯಾಚಾರಂಗಳನು
ಕಡೆಮೆಟ್ಟಿಸಲವ
ತನ್ನ
ಕರಸ್ಥಲದ
ನಿಜವೀರಶೈವಲಿಂಗದಲ್ಲಿ
ಸಲ್ಲದ
ಭವಿಶೈವ
ಮಾಟಕೂಟಂಗ?
ಮಾಡಿಕೊಂಡು
ನಡೆವ
ನರಕಜೀವಿಗಳು
ಗುರುಮಾರ್ಗಕ್ಕೆ
ಹೊರಗು.
ಅವರು
ಕೊಂಬುದು
ಸುರೆ
ಮಾಂಸವಲ್ಲದೆ
ಅವರ್ಗೆ
ಪ್ರಸಾದವಿಲ್ಲ.
ಇದು
ಕಾರಣ

ಉಭಯರನ್ನು
ಕೂಡಲಚೆನ್ನಸಂಗಯ್ಯ
ಸೂರ್ಯಚಂದ್ರರುಳ್ಳನ್ನಕ್ಕ
ನಾಯಕನರಕದಲ್ಲಿಕ್ಕುವ.