ವಿಷಯಕ್ಕೆ ಹೋಗು

ಅನಂತಕೋಟಿ ಪ್ರಾಣೇಂದ್ರಿಯ ಬ್ರಹ್ಮಾಂಡಗಳನೊಳಕೊಂಡ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya


ಅನಂತಕೋಟಿ ಬ್ರಹ್ಮಾಂಡಗಳನೊಳಕೊಂಡ ಮಹಾಘನಲಿಂಗದಲ್ಲಿ ತನ್ನ ಅಂಗ ಮನ ಪ್ರಾಣೇಂದ್ರಿಯ ವಿಷಯ ಕರಣಂಗಳ ಹೂಳಿ
ತಾನಿಲ್ಲದೆ ನಡೆವುತ್ತೆ
ತಾನಿಲ್ಲದೆ ನುಡಿವುತ್ತೆ
ತಾನಿಲ್ಲದೆ ಹಿಡಿವುತ್ತೆ
ತಾನಿಲ್ಲದೆ ಬಿಡುತ್ತೆ
ತಾನಿಲ್ಲದೆ ನೋಡುತ್ತೆ
ತಾನಿಲ್ಲದೆ ಆಡುತ್ತೆ ಬಯಲ ಬೊಂಬೆಯಂತೆ ಸುಳಿವ ಮಹಾಶರಣರ ತೋರಿಸಿ ಬದುಕಿಸಯ್ಯಾ ಎನ್ನ ಅಖಂಡೇಶ್ವರಾ.