Transclusion_Status_Detection_Tool

ಅನಾದಿ ಪರಶಿವತತ್ವದಿಂದ ಚಿತ್ತು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು



Pages   (key to Page Status)   


ಅನಾದಿ ಪರಶಿವತತ್ವದಿಂದ ಚಿತ್ತು ಉದಯವಾಯಿತ್ತು. ಆ ನಿರ್ಮಲಮಹಾಜ್ಞಾನಚಿತ್‍ಸ್ವರೂಪವೇ ಬಸವಣ್ಣ ನೋಡ. ಆ ಬಸವಣ್ಣನಿಂದ ನಾದ ಬಿಂದು ಕಳೆ. ಆ ನಾದ ಬಿಂದು ಕಳೆ ಸಮರಸವಾಗಿ ಅಖಂಡಪರಿಪೂರ್ಣಗೋಳಕಾಕಾರ ತೇಜೋಮೂರ್ತಿ ಲಿಂಗಸ್ವರೂಪವಾಯಿತ್ತು ನೋಡ. ಇದು ಕಾರಣ
ಅನಾದಿಶರಣ ಆದಿಲಿಂಗವೆಂದೆ
ಬಸವಣ್ಣನಿಂದ ಲಿಂಗವಾದ ಕಾರಣ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.