ಅಯ್ಯಾ ಜಲ, ಕೂರ್ಮ,

ವಿಕಿಸೋರ್ಸ್ದಿಂದ



Pages   (key to Page Status)   


ಅಯ್ಯಾ ಜಲ
ಕೂರ್ಮ
ಗಜ
ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು
ಗಗನವಿಲ್ಲದಂದು
ಪವನನ ಸುಳುಹಿಲ್ಲದಂದು
ಅಗ್ನಿಗೆ ಕಳೆದೋರದಂದು
ತರು ಗಿರಿ ತೃಣ ಕಾಷಾ*ದಿಗಳಿಲ್ಲದಂದು
ಯುಗ ಜುಗ
ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು
ನಿಜವನರಿದೆನೆಂಬ ತ್ರಿಜಗಾಧಿಪತಿಗಳಿಲ್ಲದಂದು ತೋರುವ ಬೀರುವ ಭಾವದ ಪರಿ
ಭಾವದಲ್ಲಿ ಭರಿತ
ಆಗಮ್ಯ ಗುಹೇಶ್ವರ ನಿರಾಳವು !