ಅರಿದಲ್ಲಿ ಮಾತ ಶರಣ

ವಿಕಿಸೋರ್ಸ್ದಿಂದ



Pages   (key to Page Status)   


ಅರಿದಲ್ಲಿ ಶರಣ ಮರೆದಲ್ಲಿ ಮಾನವನೆಂದು ನುಡಿವ ಅಜ್ಞಾನಿಗಳ ಮಾತ ಕೇಳಲಾಗದು. ಅದೇನು ಕಾರಣವೆಂದೊಡೆ : ಜಗದಗಲದ ಗುರಿಯ ಹೂಡಿ ಮುಗಿಲಗಲದ ಬಾಣವನೆಸೆದಡೆ ತಪ್ಪಿ ಕಡೆಗೆ ಬೀಳುವ ಸ್ಥಾನವುಂಟೆ ? ಒಳಹೊರಗೆ ಸರ್ವಾಂಗಲಿಂಗವಾದ ಶರಣನಲ್ಲಿ ಅರುಹುಮರಹುಗಳು ತೋರಲೆಡೆಯುಂಟೆ ? ಇದು ಕಾರಣ
ನಮ್ಮ ಅಖಂಡೇಶ್ವರನ ಶರಣನಲ್ಲಿ ತೋರುವ ತೋರಿಕೆಯೆಲ್ಲ ಲಿಂಗವು ತಾನೆ ಕಾಣಿರೊ.