ಅರಿಯದೆ ಮರೆದು ಒಂದು

ವಿಕಿಸೋರ್ಸ್ದಿಂದ



Pages   (key to Page Status)   


ಅರಿಯದೆ ಒಂದು ವೇಳೆ `ಓಂ ನಮಃಶಿವಾಯ' ಎಂದಡೆ ಮರೆದು ಮಾಡಿದ ಹಿಂದೇಳುಜನ್ಮದ ಕರ್ಮದಕಟ್ಟು ಹರಿದು ಹೋಯಿತ್ತು ನೋಡಾ ! ಅರಿದೊಂದು ವೇಳೆ `ಓಂ ನಮಃಶಿವಾಯ' ಎಂದಡೆ ದುರಿತಸಂಕುಳವೆಲ್ಲ ದೂರಾಗಿಹವು ನೋಡಾ ! ಇದು ಕಾರಣ `ಓಂ ನಮಃಶಿವಾಯ
ಓಂ ನಮಃಶಿವಾಯ' ಎಂಬ ಶಿವಮಂತ್ರವನು ಜಪಿಸಿ
ನಾನಾ ಭವದ ಬಳ್ಳಿಯ ಬೇರ ಕಿತ್ತೊಗೆದೆನಯ್ಯ ಅಖಂಡೇಶ್ವರಾ.