ಅರಿವಿನ ಕುರುಹನರಿಯದೆ ತನುವ

ವಿಕಿಸೋರ್ಸ್ದಿಂದ



Pages   (key to Page Status)   


ಅರಿವಿನ
ಕುರುಹನರಿಯದೆ
ತನುವ
ಕರಗಿಸಿ
ಮನವ
ಬಳಲಿಸಿದರೆ
ಏನು
ಪ್ರಯೋಜನವೋ?
ಇಂದ್ರಿಯವ
ನಿಗ್ರಹ
ಮಾಡಿ
ವಿಷಯಂಗಳ
ಬಂಧಿಸಿ
ಆತ್ಮಂಗೆ
ಬಂಧನವ
ಮಾಡಿದರೆ
ಆತ್ಮದ್ರೋಹ
ಕಾಣಿಭೋ.
ಹೀಂಗೆ
ಉದ್ದೇಶದಿಂದ
ತನುವ
ಒಣಗಿಸಿದರೆ
ಹಸಿಯ
ಮರನ
ತರಿದು
ಬಿಸಿಲಿಗೆ
ಹಾಕಿದಂತೆ.
ತನು
ಒಣಗಿದರೇನಯ್ಯ?
ಮನದ
ಮಲಿನ
ಹಿಂಗದು.
ಮನದ
ಮಲಿನ
ಹಿಂಗದನ್ನಕ್ಕರ
ಭವ
ಹಿಂಗಿತ್ತೆಂಬ
ಭಂಡರನೇನೆಂಬೆನಯ್ಯಾ?
ಮಹಾಲಿಂಗಗುರು
ಶಿವಸಿದ್ಧೇಶ್ವರ
ಪ್ರಭುವೇ.