ಅರಿವು ಮರವೆಯನರಿದು ನೆರೆನಿಂದ

ವಿಕಿಸೋರ್ಸ್ದಿಂದ



Pages   (key to Page Status)   


ಅರಿವು ಮರವೆಯನರಿದು ನೆರೆನಿಂದ ನಿಜವನಾರು ಬಲ್ಲರೊ ? ಭಾವ ನಿರ್ಭಾವವ ಮೀರಿದ ಮಹಾಘನವ ಭಾವಿಸುವರಿನ್ನಾರೊ ? ಅದು ಭಾವಕ್ಕತೀತವಾಗಿ ಭಾವಿಸಲಿಲ್ಲ
ಮನಕ್ಕೆ [ಅ]ಗೋಚರವಾಗಿ ನೆನೆಯಲಿಲ್ಲ. ಅರಿವುದಕ್ಕೆ ಕುರುಹಿಲ್ಲ
ಮರೆವುದಕ್ಕೆ ತೆರಹಿಲ್ಲ. ಜ್ಞಾತೃ
ಜ್ಞಾನ
ಜ್ಞೇಯವಳಿದು ನಿಃಪತಿ
ಗುಹೇಶ್ವರಾ ನಿಮ್ಮ ಶರಣ
ನಿಶ್ಚಿಂತನಿವಾಸಿಯಾದನು