ಅರುಹಿನಾಪ್ಯಾಯನಕ್ಕೆ ಅನುಭಾವವೇ ತೃಪ್ತಿ.

ವಿಕಿಸೋರ್ಸ್ದಿಂದ



Pages   (key to Page Status)   


ಅರುಹಿನಾಪ್ಯಾಯನಕ್ಕೆ ಅನುಭಾವವೇ ತೃಪ್ತಿ. ಅರಿವು ನೆರೆ ಕೂಡಿ
ಆಚಾರವೆ ಪ್ರಾಣವಾಗಿ ವಿಶ್ರಮಿಸಿದ ಬಳಿಕ
ಶ್ರೀಗುರು ಕೃಪೆಮಾಡಿದ ಪ್ರಾಣಲಿಂಗದ ದುರುಶನ ಎಂತೆಂದಡೆ : ಮತ್ಸ್ಯನುಂಗಿದ ಮಾಣಿಕ್ಯದಂತೆ ಹೊಸ್ತಿಲಲೆತ್ತಿದ ಜ್ಯೋತಿಯಂತೆ ಸ್ಫಟಿಕದ ಘಟದಂತೆ
ಮುತ್ತು ನುಂಗಿದ ನೀರಿನಂತೆ ಕಣ್ಣಾಲೆ ನುಂಗಿದ ನೋಟದಂತೆ ಬಯಲನೊಳಕೊಂಡ ಬ್ರಹ್ಮಾಂಡದೊಳಗಿಪ್ಪ ಸ್ವಾನುಭಾವಿಗಳ ಅನುಭಾವವ ತೋರಿ ಬದುಕಿಸು ಕೂಡಲಚೆನ್ನಸಂಗಮದೇವಾ.