ಅರುಹು ತಲೆದೋರಿತೆಂದು, ಗುರುಹಿರಿಯರ

ವಿಕಿಸೋರ್ಸ್ದಿಂದ



Pages   (key to Page Status)   


ಅರುಹು ತಲೆದೋರಿತೆಂದು
ಗುರುಹಿರಿಯರ ಜರಿಯಲಾಗದಯ್ಯ. ಗುರುವನು ಜರಿಯೆ; ಹಿರಿಯರನು ಜರಿಯೆ; ಅದೇನು ಕಾರಣವೆಂದಡೆ; ಗುರುವೇ ಸದ್ರೂಪು
ಲಿಂಗವೇ ಚಿದ್ರೂಪು
ಜಂಗಮವೇ ಆನಂದಸ್ವರೂಪು. ಇವು ಮೂರು ಬರಿಯ ಅರುಹು ಸ್ವರೂಪು. ಅವ ಜರಿಯಲುಂಟೆ?. ನಡುವಣ ಪ್ರಕೃತಿಯ ಜರಿವುತ್ತಿಪ್ಪೆನಯ್ಯ. ಆ ಪ್ರಕೃತಿಯ ಜರಿದರೆ ಗುರುಹಿರಿಯರಿಗೆ ನಿಮಗೇಕೆ ದುಮ್ಮಾನವಯ್ಯ?. ಪ್ರಕೃತಿಯೇನು ನಿಮ್ಮ ಸೊಮ್ಮೆ ಹೇಳಿರಯ್ಯ. ಜೀವನೋಪಾಯಕ್ಕೆ ಪರಮಾರ್ಥವನಲ್ಲಾಯೆಂಬ ಪ್ರಪಂಚಿಗಳ ಮೆಚ್ಚನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.