ಅರ್ಥಪ್ರಾಣಾಭಿಮಾನವ ಕೊಟ್ಟು ಕರ್ತೃ-ಭೃತ್ಯನ

ವಿಕಿಸೋರ್ಸ್ದಿಂದ



Pages   (key to Page Status)   


ಅರ್ಥಪ್ರಾಣಾಭಿಮಾನವ ಕೊಟ್ಟು ಕರ್ತೃ-ಭೃತ್ಯನ ಮಾತಿಗೆ ಮನೆಯ ಬಾಗಿಲಿಗೆ ಹೋಗಿ
`ನನಗೆ ಮಾಡಿ ನೀಡು' ಎಂದು ಉಪಾಧಿಕೆಯ ನುಡಿದರೆ ಅವನ ಕರ್ತೃತನ ಅದೇ ಹಾಳು. ಅದೇನು ಕಾರಣ ಎಂದರೆ ಕರ್ತನಿದ್ದೆಡೆಗೆ ಭೃತ್ಯ ತಾನೆ ಬಂದು
ದೀರ್ಘದಂಡ ನಮಸ್ಕಾರ ಮಾಡಿ
ಅಷ್ಟವಿಧಾರ್ಚನೆ ಷೋಡಶೋಪಚಾರವ ಮಾಡಬಲ್ಲಾತನೆ ಭೃತ್ಯ
ಪರಿಣಾಮಿಸಬಲ್ಲಾತನೆ ಕರ್ತ ಕೂಡಲಚೆನ್ನಸಂಗಮದೇವರಲ್ಲಿ ಮೀರಿದ ಸಯಸ್ಥಲವಪೂರ್ವ