ಅಷ್ಟಾಷಷಿ*ಕೋಟಿ ತೀರ್ಥವ ಮಿಂದರಿಲ್ಲ

ವಿಕಿಸೋರ್ಸ್ದಿಂದ



Pages   (key to Page Status)   


ಅಷ್ಟಾಷಷಿ*ಕೋಟಿ ತೀರ್ಥವ ಮಿಂದರಿಲ್ಲ ಕಾಣಿರಣ್ಣ. ಲಕ್ಷ ಲಕ್ಷ ಕೋಟಿ ಕೋಟಿ ಜಪ (ವ)ನೆಣಿಸಿದರಿಲ್ಲ ಕಾಣಿರಣ್ಣ. ಧ್ಯಾನ ಮೌನ ಹೋಮ ನೇಮ ಅನುಷಾ*ನವ ಮಾಡಿದರಿಲ್ಲ ಕಾಣಿರಣ್ಣ. ನೂರಿಪ್ಪತ್ತುವೇಳೆ ಭೂಪ್ರದಕ್ಷಿಣವ ಮಾಡಿದರಿಲ್ಲ ಕಾಣಿರಣ್ಣ. ಕಾಶಿ ಕೇದಾರ ಶ್ರೀಶೈಲ ಶಿವಗಂಗೆಗೈದಿದರಿಲ್ಲ ಕಾಣಿರಣ್ಣ. ಇವೆಲ್ಲ ಬರಿಯ ಭ್ರಾಂತು. ಇಪ್ಪ ಠಾವ ಹೇಳಿಹೆನು ಕೇಳಿರಣ್ಣ. ಶ್ರೀಗುರು ಕರುಣದಿಂದ ಬಿಜಯಂಗೈಸಿ ಕೊಟ್ಟ ಪರಮಲಿಂಗ ತನ್ನ ಕರದಲ್ಲಿ ತುಂಬಿಪ್ಪುದಯ್ಯ. ಹಲವು ಕಡೆಗೆ ಹೋಹ ಮನವ ಧ್ಯಾನವೆಂಬ ಹಸ್ತದಲ್ಲಿ ಹಿಡಿದು ಆ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆಯಬಲ್ಲರೆ ಅಲ್ಲಿಪ್ಪನು ಶಂಭು ಪರಮೇಶ್ವರನು. ಇದೇ ನಿಶ್ಚಯ; ಉಳಿದವೆಲ್ಲ ಹುಸಿ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.