ಅಹಂಕಾರವನೆ ಮರೆದು, ದೇಹಗುಣಂಗಳನೆ

ವಿಕಿಸೋರ್ಸ್ದಿಂದ



Pages   (key to Page Status)   


ಅಹಂಕಾರವನೆ ಮರೆದು
ದೇಹಗುಣಂಗಳನೆ ಜರೆದು
ಇಹ ಪರವು ತಾನೆಂದರಿದ ಕಾರಣ
ಸೋಹಂ ಭಾವ ಸ್ಥಿರವಾಯಿತ್ತು. ಸಹಜದುದಯದ ನಿಲವಿಂಗೆ
ಮಹಾಘನಲಿಂಗದ ಬೆಳಗು ಸ್ವಾಯತವಾದ ಕಾರಣ ಗುಹೇಶ್ವರಾ ನಿಮ್ಮ ಶರಣನು ಉಪಮಾತೀತನು.