ಆಕಾಶದಲ್ಲಾಡುವ ಪಟಕ್ಕಾದಡೆಯೂ ಮೂಲಸೂತ್ರವಿರಬೇಕು.
ಗೋಚರ
ಲೇಖಕರು: ಚೆನ್ನಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1144-1168 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಆಕಾಶದಲ್ಲಾಡುವ
ಪಟಕ್ಕಾದಡೆಯೂ
ಮೂಲಸೂತ್ರವಿರಬೇಕು.
ಕಲಿಯಾದಡೆಯೂ
ಕಜ್ಜವಿಲ್ಲದೆ
ಆಗದು.
ಭೂಮಿಯಿಲ್ಲದೆ
ಬಂಡಿ
ನಡೆವುದೆ
?
ಅಂಗಕ್ಕೆ
ಲಿಂಗವಿಲ್ಲದೆ
ನಿಸ್ಸಂಗವಾಗಬಾರದು.
ಕೂಡಲಚೆನ್ನಸಂಗಮದೇವರಲ್ಲಿ
ಸಂಗವಿಲ್ಲದೆ
ನಿಸ್ಸಂಗಿಯೆಂದು
ನುಡಿಯಬಹುದೆ
ಪ್ರಭುವೆ
?