ಆದಿಯಲ್ಲಿ ಹುಟ್ಟಿದಾತನು ಮೇದಿನಿಗಿಳಿದು

ವಿಕಿಸೋರ್ಸ್ದಿಂದ



Pages   (key to Page Status)   


ಆದಿಯಲ್ಲಿ ಹುಟ್ಟಿದಾತನು ಮೇದಿನಿಗಿಳಿದು ತನ್ನಾದಿಯಂತುವ ಮರೆದು ಮೇದಿನಿಯೆ ತಾನೆಂಬಂತಿಪ್ಪನು ನೋಡಾ. ಆದಿಯಿಂದಗಲಿ ಭೇದವಾದಿಯಾಗಿ ಅವಿಚಾರಿಯಾದನು ನೋಡಾ. ಮೇದಿನಿಯ ಹೃದಯದಲ್ಲಿ ನಾದಬ್ರಹ್ಮದ ಕಳೆ ಉದಯವಾಗಲು ಮೇದಿನಿಯ ಗುಣ ಧರ್ಮ ಕರ್ಮ ವರ್ಣಾದಿ ದೇವತೆಗಳಳಿದು ಆದಿಮಾಹೇಶ್ವರನೆಂದರಿದೆನು ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.