ಈಶ್ವರನ ದ್ರೋಣವ ಮಾಡಿ,

ವಿಕಿಸೋರ್ಸ್ದಿಂದ



Pages   (key to Page Status)   


ಈಶ್ವರನ ದ್ರೋಣವ ಮಾಡಿ
ಪದ್ಮನಾಭನ ನಾರಿಯ ಮಾಡಿ
ಕಮಲಜನೆಂಬ ಬಾಣವ ತೊಟ್ಟು
ತ್ರಿಭುವನವನೆಚ್ಚವರಾರೊ ? ಚಂದ್ರಸೂರ್ಯರ ಬೆನ್ನ ಮೆಟ್ಟಿ
ಸುವರ್ಣದ ಮಳೆಯ ಕರಸಿದವರಾರೊ ? ದೇವದಾನವ ಮಾನವರೆಲ್ಲ
ಈ ಬಾಣಕ್ಕೆ ಗುರಿಯಾಗಿ ಬಿದ್ದರು. ಗುಹೇಶ್ವರ ಶೂನ್ಯ ನಿಶ್ಶೂನ್ಯದೊಳಗೆ !